ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಕಲಿ ದಾಖಲೆ ಸೃಷ್ಟಿಸಿ ಕರ್ತವ್ಯಕ್ಕೆ ಹಾಜರಾಗಲು ಬಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರದ ಶಿವಾನಂದ್ ಪಾಟೀಲ್ ಹಾಗೂ ಕಲಬುರಗಿಯ ವಿಶಾಲ್ ಬಂಧಿತರು. ಇಬ್ಬರೂ ಶಿವಮೊಗ್ಗದ KSRTC ವಿಭಾಗೀಯ ಕಚೇರಿಯಲ್ಲಿ ಸಂಚಾರ ನಿರೀಕ್ಷಕರ ಹುದ್ದೆಗೆ ಹಾಜರಾಗಲು ಬಂದಿದ್ದರು.
READ | ನಾಗರ ಹಾವು ಸಾಯಿಸಿದ ಸ್ಮಾರ್ಟ್ ಸಿಟಿ ಎಂಜಿನಿಯರ್ ಸೇರಿ ಮೂವರ ಮೇಲೆ ಕೇಸ್
ಕರ್ತವ್ಯಕ್ಕೆ ಹಾಜರಾಗಲು ಅನುಮತಿ ಕೋರುವುದಕ್ಕೆ ಬಂದಾಗ ಅವರು ತಂದಿದ್ದ ನೇಮಕಾತಿ ಪತ್ರ, ತರಬೇತಿ ಆದೇಶ ಮತ್ತಿತರ ದಾಖಲೆಗಳು ನಕಲಿ ಎಂಬುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ತಕ್ಷಣ ಅವರ ವಿರುದ್ಧ ದೂರು ನೀಡಲಾಗಿದ್ದು, ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ.