ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಚೆಕ್ ಅಮಾನ್ಯ ಪ್ರಕರಣದ ವಿಚಾರಣೆ ನಡೆಸಿರುವ ನಗರದ ಒಂದನೇ ಹೆಚ್ಚುವರಿ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.
READ | ನಿಮ್ಮ ಬಳಿ ಒಳ್ಳೆಯ ಕಥೆ ಇದೆಯೇ?, ಕಿರುಚಿತ್ರಕ್ಕೆ ಇದೊಂದು ಉತ್ತಮ ಅವಕಾಶ
ಏನಿದು ಪ್ರಕರಣ?
ಶಿವಮೊಗ್ಗದ ನಲ್ಲ ಹನುಮಂತಪ್ಪ ಎಂಬುವವರು ವಿಐಎಸ್.ಎಲ್ ನಿವೃತ್ತ ಅಧಿಕಾರಿ ಹನುಮಂತಪ್ಪ ಎಂಬುವವರಿಗೆ 8 ಲಕ್ಷ ರೂ. ಚೆಕ್ ನೀಡಿದ್ದರು. ಅದು ಅಮಾನ್ಯಗೊಂಡಿದೆ. ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆ ನಡೆಸಿ ತಿಂಗಳೊಳಗಾಗಿ 8 ಲಕ್ಷ ರೂ. ಬದಲಿಗೆ 16 ಲಕ್ಷ ರೂ. ಹಣ ಪಾವತಿಸಬೇಕು. ಹಣ ಪಾವತಿಸದಿದ್ದರೆ 1 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ.