ಸುದ್ದಿ ಕಣಜ.ಕಾಂ | KARNATAKA | CM MEETING
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದ್ದು, ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅದರ ಹೈಲೈಟ್ಸ್ ಇಲ್ಲಿವೆ.
READ | ಶಿವಮೊಗ್ಗದಲ್ಲಿ ಖಾಕಿ ರೌಂಡ್ಸ್, ಎಲ್ಲಿಂದ ಎಲ್ಲಿಯವರೆಗೆ ರೂಟ್ ಮಾರ್ಚ್?
- ಸೋಮವಾರದಿಂದ 10ನೇ ತರಗತಿವರಗೆ ಶಾಲೆಗಳು ಪುನಾರಂಭವಾಗಲಿವೆ. ಸೋಮವಾರದವರೆಗೆ ಪಿಯು ತರಗತಿ ಇರಲ್ಲ. ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ
- ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
- ಸೂಕ್ಷ್ಮ ಜಿಲ್ಲೆಗಳಲ್ಲಿ ಎಸ್ಪಿ, ಡಿಸಿಗಳು ಶಾಲೆ ಆವರಣಕ್ಕೆ ಭೇಟಿ ನೀಡಬೇಕು. ಶಾಲಾ ಆಡಳಿತದವರೊಂದಿಗೆ ಡಿಸಿ, ಎಸ್ಪಿ, ಡಿಡಿಪಿಐ ನಿರಂತರ ಸಂಪರ್ಕ ಹೊಂದಿರಬೇಕು.
- ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಸೂಕ್ತ ಕ್ರಮ ಕೈಗೊಳ್ಳಿ. ಧಾರ್ಮಿಕ ಮುಖಂಡರು, ಸಂಘ, ಸಂಸ್ಥೆಯವರೊಂದಿಗೆ ಶಾಂತಿ ಸಭೆ ನಡೆಸಿ, ನ್ಯಾಯಾಲಯದ ಸೂಚನೆ ಅಕ್ಷರಶಃ ಪಾಲಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೇ ಸಣ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು.
- ಆದ್ಯತೆಯ ಮೇರೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹೊರಗಿನ ಪ್ರಚೋದನೆಗಳಿಗೆ ಒಳಗಾಗದಂತೆ ಸೂಕ್ತ ಕೈಗೊಳ್ಳಬೇಕು.
- ಜಿಲ್ಲೆಯ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಫೀಲ್ಡ್ ನಲ್ಲಿರಬೇಕು.
- ಸಾಮಾಜಿಕ ಮಾಧ್ಯಮ ವದಂತಿ, ಪ್ರಚೋದನಕಾರಿ ಸಂದೇಶ ಹರಡದಂತೆ ಸೂಕ್ತ ನಿಗಾ ವಹಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಕ್ರಮಕೈಗೊಳ್ಳಬೇಕು.
- ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಶೀಘ್ರವೇ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಮೇಲಿನ ಆದೇಶಕ್ಕೆ ಕಾಯದೇ ತಕ್ಷಣ ಸ್ಥಳೀಯ ಆಡಳಿತವೇ ನಿರ್ಧಾರಕ್ಕೆ ಕೈಗೊಳ್ಳುವ ಪೂರ್ಣ ಅಧಿಕಾರ ನೀಡಲಾಗಿದೆ.
- ಮಾಧ್ಯಮದವರು ವಸ್ತುಸ್ಥಿತಿಯನ್ನು ಸರಿಯಾಗಿ ಪ್ರಸಾರ ಪಡಿಸಬೇಕು. ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಶಾಂತಿ ನೆಲೆಸಿದ್ದು ಅದನ್ನೂ ಫೋಕಸ್ ಮಾಡಬೇಕು.
https://www.suddikanaja.com/2022/01/19/corona-positive-cases-in-increasing-at-shivamogga-school-and-colleges/