ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಸುರಿದ ದಿಢೀರ್ ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ವಿವಿಧೆಡೆ ಅನಾಹುತಗಳು ಸಂಭವಿಸಿವೆ. ಅದರಲ್ಲೂ ಸೊರಬದಲ್ಲಿ ಸಾಕಷ್ಟು ನಷ್ಟವಾಗಿದೆ.
READ | ಮಲೆನಾಡಿನಲ್ಲಿ ಆನೆಗಳ ತಡೆಗೆ ರೆಡಿಯಾಯ್ತು ಮಾಸ್ಟರ್ ಪ್ಲ್ಯಾನ್, ಏನದು ಇಲ್ಲಿದೆ ಮಾಹಿತಿ
ತಾಲೂಕಿನ ಉರುಗನಹಳ್ಳಿಯಲ್ಲಿ ಮರಗಳು ನೆಲಕ್ಕೆ ಉರುಳಿವೆ. ಇದೇ ಉರುಗನಹಳ್ಳಿಯ ಶ್ರೀ ಕಾಳಿಂಗೇಶ್ವರ ದೇವಸ್ಥಾನ ಮುಂದಿನ ಪ್ರಸಿದ್ಧ ಹಾಗೂ ಜನರಿಂದ ಪೂಜಿಸಲ್ಪಡುತ್ತಿದ್ದ ‘ಸಿಹಿ ಬೇವಿನ ಮರ’ ಕೂಡ ಧರೆಗೆ ಉರುಳಿದೆ. ನಾಗಪಂಚಮಿ, ವಿಶೇಷ ದಿನಗಳಲ್ಲಿ ಭಕ್ತರು ಇಲ್ಲಿಗೆ ಹರಿದು ಬರುತಿದ್ದರು. ಮರದ ಕೆಳಭಾಗದಲ್ಲಿ ನೂರಾರು ನಾಗರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಹಲವೆಡೆ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ. ತಾಲೂಕಿನ ಮಾವಲಿ, ಕೊಡಕಣಿ ಗ್ರಾಮಗಳಲ್ಲಿ ರಸ್ತೆ ಇಕ್ಕೆಲಗಳಲ್ಲಿನ ಮರಗಳು ಗಾಳಿಗೆ ನೆಲಕ್ಕುರುಳಿವೆ. ಹಾಗಾಗಿ, ವಾಹನಗಳ ಸಂಚಾರಕ್ಕೂ ಅಡ್ಡಿ ಉಂಟಾಗಿದೆ. ಶಿರಾಳಕೊಪ್ಪ ಮಾರ್ಗವಾಗಿ ಸೊರಬ ಆಗಮಿಸುವ ವಾಹನಗಳು ಹೆಗ್ಗೊಡು-ಹಾಲಗಳಲೆ ಮೂಲಕ ಪಟ್ಟಣಕ್ಕೆ ಆಗಮಿಸಿತ್ತಿವೆ. ಕೊಡಕಣಿ ಹೆಗ್ಗೋಡೆ , ಶಾಂತಗೇರಿಗಳಲ್ಲಿ ಬಾಳೆ ತೋಟಗಳು ಅಡಿಕೆ ಮರಗಳು ಕುಸಿದಿವೆ.
READ | ಚಿನ್ನಾಭರಣ ಪ್ರಿಯರಿಗೆ ಹೋಳಿ ಹಬ್ಬದ ಗಿಫ್ಟ್, ಚಿನ್ನ, ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ
ಮಾವಿನ ಫಸಲಿಗೂ ಮಳೆಯ ಕಾಟ
ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿಯಲ್ಲೂ ಶುಕ್ರವಾರ ಸುರಿದಿರುವ ಮಳೆ ಮಾವಿನ ಫಸಲಿನ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ. ಒಣಗಿಸಲು ಹಾಕಿದ್ದ ಶುಂಠಿ ಕೂಡ ಒದ್ದೆಯಾಗಿದೆ.