ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಏಕಾಏಕಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಸುರಿದಿರುವ ಮಳೆ ಅನಾಹುತಗಳನ್ನು ಸೃಷ್ಟಿಸಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿ ಬಿಡುಗಡೆ ಮಾಡಿದೆ. ಅದರನ್ವಯ, ಜಿಲ್ಲೆಯಲ್ಲಿ ಒಟ್ಟು 110 ಮನೆಗಳಿಗೆ ನೀರು ನುಗ್ಗಿದೆ. ಕಳೆದ ಐದು ದಿನಗಳಲ್ಲಿ ಒಟ್ಟು 45 ಮನೆಗಳಿಗೆ ಹಾನಿಯಾಗಿದೆ.
READ | ಕೆಳದಿ ಶಿವಪ್ಪ ನಾಯಕ ಕೃಷಿ ವಿವಿಯಲ್ಲಿ 23 ನೂತನ ಕೋರ್ಸ್’ಗಳ ಆರಂಭ
ತಾಲೂಕುವಾರು ಮಳೆಯ ವಿವರ
ಕಳೆದ 24 ಗಂಟೆಗಳಲ್ಲಿ 5 ಎಂಎಂ ಮಳೆಯಾಗಿದೆ. ಅದರಲ್ಲಿ ಶಿಕಾರಿಪುರದಲ್ಲಿ ಅತ್ಯಧಿಕ 16 ಎಂಎಂ ವರ್ಷಧಾರೆಯಾಗಿದೆ. ಭದ್ರಾವತಿ 2.1, ಹೊಸನಗರ 3.6, ಸಾಗರ 2.4, ಶಿವಮೊಗ್ಗ 1.5, ಸೊರಬ 9.2, ತೀರ್ಥಹಳ್ಳಿ 5.1 ಎಂಎಂ ಮಳೆಯಾಗಿದೆ.
ಬಿಳಕಿ ಕ್ರಾಸ್ ಬಳಿ ನೆರೆಯಿಂದ ಅನಾಹುತ
ಬಿಳಕಿ ಕ್ರಾಸ್, ಬೈಪಾಸ್ ಸೇರಿದಂತೆ ಹಲವೆಡೆ ಮಳೆಯಿಂದಾಗಿ ನೆರೆ ಸೃಷ್ಟಿಯಾಗಿತ್ತು. ಈ ವೇಳೆ, 110 ಮನೆಗಳಿಗೆ ನೀರು ನುಗ್ಗಿವೆ. ಹಲವು ಅಂಗಡಿಗಳಿಗೂ ನೀರು ನುಗ್ಗಿದ್ದರಿಂದ ಭಾರಿ ನಷ್ಟವಾಗಿದೆ.
https://suddikanaja.com/2022/05/20/shivamogga-mp-by-raghavendra-visited-flood-areas/