ಸುದ್ದಿ ಕಣಜ.ಕಾಂ | DISTRICT | LEOPARD CAPTURED
ಶಿವಮೊಗ್ಗ: ಹೊನ್ನಾಳಿಯ ಬೈರನಹಳ್ಳಿ ಗ್ರಾಮದ ಸಮೀಪ ಶ್ರೀನಿಧಿ ಎಸ್ಟೇಟ್’ನಲ್ಲಿ ಸೆರೆ ಹಿಡಿದಿರುವ ಚಿರತೆಯನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ.
ಸಾಸ್ವೆಹಳ್ಳಿಯ ಹೋಬಳಿ ಹಳ್ಳಿಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ಕಾಣಿಸಿಕೊಂಡು ಜನ ಭಯಕ್ಕೆ ಕಾರಣವಾಗಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ನಾಯಿಗಳನ್ನು ಎಳೆದೊಯ್ಯುತ್ತಿದ್ದ ಚಿರತೆ
ಕ್ಯಾಸಿನಕೆರೆ, ಹಟ್ಟಿಹಾಳ್, ಚೀಲಾಪುರ, ಬೈರನಹಳ್ಳಿ, ಹುಣಸಘಟ್ಟ ಗ್ರಾಮಗಳ ಹೊರವಲಯದಲ್ಲಿ ಆಗಾಗ ಕಾಣಿಸಿಕೊಳ್ಳುತಿತ್ತು. ರಾತ್ರಿ ಹೊತ್ತಿನಲ್ಲಿ ಗ್ರಾಮಗಳಿಗೆ ನುಗ್ಗಿ ಬೀದಿನಾಯಿಗಳನ್ನು ಹೊತ್ತೊಯ್ಯುತಿತ್ತು. ಈ ಕಾರಣದಿಂದ ಜನ ಭಯಕ್ಕೀಡಾಗಿದ್ದರು.
READ | ಮನೆಯ ಗೋಡೆ ಕುಸಿದು ನಾಲ್ಕು ಜನರಿಗೆ ಗಾಯ
ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ
ಗ್ರಾಮಸ್ಥರ ಮನವಿಯ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಸೋಮವಾರ ರಾತ್ರಿ ಎಸ್ಟೇಟ್’ನಲ್ಲಿ ಬೋನು ಇಡಲಾಗಿತ್ತು. ಆದರೆ, ಸೆರೆ ಸಿಕ್ಕಿರಲಿಲ್ಲ. ಶನಿವಾರ ಬೈರನಹಳ್ಳಿ ಗ್ರಾಮದ ಜಿವಿಎಂ ರಾಜು ಅವರಿಗೆ ಚಿರತೆ ಕಾಣಿಸಿಕೊಂಡಿದೆ. ಬೋನನ್ನು ಮತ್ತೆ ಎಸ್ಟೇಟ್ ಗೆ ಸ್ಥಳಾಂತರ ಮಾಡಲಾಗಿದೆ. ಆಗ ಚಿರತೆ ಬೋನಿಗೆ ಬಿದ್ದಿದೆ.
https://suddikanaja.com/2020/12/16/senior-tiger-died-in-shivamogga-zoo-tyavarekoppa/