HIGHLIGHTS
- ತಮ್ಮ ಮೂರನೇ ಕಲಾಪದ ಅನುಭವ ಹಾಗೂ ಮಾಡಿದ ಕೆಲಸಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಂಡ ಶಾಸಕ ಡಿ.ಎಸ್.ಅರುಣ್
- ಕಲಾಪದಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಿದೆ, ಸರ್ಕಾರ ಎಲ್ಲದಕ್ಕೂ ಸಕಾರಾತ್ಮಕವಾಗಿ ಸ್ಪಂದಿಸಿದೆ
ಸುದ್ದಿ ಕಣಜ.ಕಾಂ | DISTRICT | 27 SEP 2022
ಶಿವಮೊಗ್ಗ: ಕೆಎಸ್ಆರ್ಟಿಸಿ ನೌಕರರಿಗೆ ಕಳೆದ 4 ವರ್ಷದಿಂದ ವೇತನದ ಪರಿಷ್ಕರಣೆಯಾಗದೆ ವೇತನ ಹೆಚ್ಚಳವಾಗಿರಲಿಲ್ಲ. ನನ್ನ ಪ್ರಶ್ನೆಗೆ ಸಾರಿಗೆ ಸಚಿವರು ವೇತನ ಪರಿಷ್ಕರಣೆಗೆ ಒಪ್ಪಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಮಹತ್ವ ನೀಡಲು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಡ ನಡೆಸಲು ವಿಶೇಷ ಅನುದಾನ ಬಿಡುಗಡೆ ಮಾಡಲು ಒಪ್ಪಿದೆ ಎಂದರು.
ಗ್ರಾಪಂ ನೌಕರರ 16 ತಿಂಗಳ ವೇತನ ರಿಲೀಸ್
ಸರ್ಕಾರ ಗ್ರಾಮ ಪಂಚಾಯಿತಿ ನೌಕರರ 16 ತಿಂಗಳ ಬಾಕಿ ವೇತನ ₹7.31 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಅರುಣ್ ಅಭಿನಂದಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಿ ಶೂನ್ಯ ವೇಳೆಯಲ್ಲಿ ಚುಕ್ಕಿ ಪ್ರಶ್ನೆ ಕೇಳಲು ಅವಕಾಶ ಸಿಕ್ಕಿದ್ದು, ಗ್ರಾಮ ಪಂಚಾಯಿತಿ ನೌಕರರ 16 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡುವಂತೆ ಕೇಳಿದ ಪ್ರಶ್ನೆಗೆ ಸರ್ಕಾರ ಸ್ಪಂದಿಸಿ ಇಂದು ವೇತನ ಬಿಡುಗಡೆ ಮಾಡಿದೆ ಎಂದರು.
READ | ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ನಾನು ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾದ ನಂತರ ಭಾಗವಹಿಸುತ್ತಿರುವ 3ನೇ ಅಧಿವೇಶನ ಇದಾಗಿತ್ತು. ಒಂದು ದಿನವು ತಪ್ಪಿಸದೆ ಕಲಾಪದಲ್ಲಿ ಭಾಗವಹಿಸಿದ್ದೇನೆ. ಕಲಾಪದಲ್ಲಿ ಭಾಗವಹಿಸಿರುವುದೇ ನನ್ನ ದೊಡ್ಡ ಅದೃಷ್ಠವಾಗಿದೆ ಎಂದರು.
ಕಲಾಪದಲ್ಲಿ ಹಲವಾರು ಪ್ರಮುಖ ವಿಷಯಗಳ ಚರ್ಚೆಯಾಗಿ ಉತ್ತರ ಸಿಕ್ಕಿದ್ದು, ರಾಜ್ಯದಲ್ಲಿ ಆಗಿರುವ ಮಳೆಯಿಂದಾದ ಅನಾಹುತಗಳು ಸೇರಿದಂತೆ ಹಲವಾರು ವಿಷಯಗಳು ಚರ್ಚೆಯಾಗಿದ್ದು, ನಾನು ಸಹ ಹಲವಾರು ಪ್ರಶ್ನೆಗಳನ್ನು ಕೇಳಿದ್ದೆ.
ಅವುಗಳಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಲು ಅವಕಾಶ ಸಿಕ್ಕಿದ್ದು ಎಲ್ಲದಕ್ಕೂ ಉತ್ತರ ಸಿಕ್ಕಿರುವುದು ತೃಪ್ತಿ ತಂದಿದೆ.
ಟ್ರೇಡಿಂಗ್ ಲೈಸೆನ್ಸ್ ರದ್ದುಪಡಿಸಲು ಮನವಿ
ವ್ಯಾಪಾರಸ್ಥರಿಗೆ ಟ್ರೆಡಿಂಗ್ ಲೈಸೆನ್ಸ್ ರದ್ದುಪಡಿಸುವಂತೆ ಕಲಾಪದಲ್ಲಿ ಗಮನ ಸೆಳೆದಿದ್ದು, ಇದಕ್ಕೆ ಎಲ್ಲ ಸದಸ್ಯರು ಧ್ವನಿಗೂಡಿಸಿದ್ದರಿಂದ ಸರ್ಕಾರ ರದ್ದುಪಡಿಸುವ ಬಗ್ಗೆ ಭರವಸೆ ನೀಡಿದೆ ಎಂದರು.
ಕೆ.ಪಿ.ಎಸ್.ಸಿ. ನೇಮಕಾತಿ ಪ್ರಕ್ರಿಯೆ ಕೂಡ 18 ತಿಂಗಳ ಕಾಲ ವಿಳಂಬವಾಗುತ್ತಿರುವುದರಿಂದ ಅಭ್ಯರ್ಥಿಗಳ ಅರ್ಹತೆ ಮುಗಿಯುತ್ತಿದೆ. ತ್ವರಿತಗತಿಯಲ್ಲಿ ನೇಮಕಾತಿ ನಡೆಸಲು ಭರವಸೆ ಸಿಕ್ಕಿದೆ ಎಂದು ಹೇಳಿದರು.
ಪ್ರಮುಖರಾದ ಹೃಷಿಕೇಶ್ ಪೈ, ಶ್ರೀನಾಗ್, ಮಂಜುನಾಥ್ ಇತರರು ಉಪಸ್ಥಿತರಿದ್ದರು.
https://suddikanaja.com/2022/09/27/preventive-detention-of-five-pfi-activist-at-shivamogga-and-bhadravathi/