HIGHLIGHTS
- 2018ರಲ್ಲಿ ರಾಮಮಂದಿರ, 2019ರಲ್ಲಿ ಛತ್ರಪತಿ ಶಿವಾಜಿ, 2022ರಲ್ಲಿ ಮಹಾಭಾರತ ಯುದ್ಧದಲ್ಲಿ ಅರ್ಜುನನ ಸಾರಥಿಯಾದ ಶ್ರೀಕೃಷ್ಣ ಪರಮಾತ್ಮ
- ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಗೆ ಶಿವಮೊಗ್ಗ ಸಿದ್ಧ
- ವಾಟ್ಸಾಪ್ ಸ್ಟೇಟಸ್’ನಲ್ಲೂ ರಾರಾಜಿಸುತ್ತಿರುವ ಮಹಾದ್ವಾರ
ಸುದ್ದಿ ಕಣಜ.ಕಾಂ | CITY | 08 SEP 2022
ಶಿವಮೊಗ್ಗ: ಕಳೆದ ಎರಡು ವರ್ಷಗಳಿಂದ ಕೋವಿಡ್ (Covid) ನಿಂದಾಗಿ ಗಣಪತಿ ಮೆರವಣಿಗೆ (Ganapathi procession) ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಯಾವುದೇ ಅಡ್ಡಿಗಳಿಲ್ಲದೇ ಗಣಪತಿ ಹಬ್ಬ ಜರುಗುತ್ತಿದೆ.
VIDEO REPORT
ಅದರಲ್ಲೂ ಶಿವಮೊಗ್ಗ(shivamogga)ದ ಹಿಂದೂ ಮಹಾಸಭಾ ಗಣಪತಿ (Hindu Mahasabha Ganapathi) ಆಕರ್ಷಣೆಯ ಕೇಂದ್ರ. ಸೆಪ್ಟೆಂಬರ್ 9ರಂದು ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ನಡೆಯಲಿದ್ದು, ಅದಕ್ಕೋಸ್ಕರ ಗಾಂಧಿ ಬಜಾರಿನಲ್ಲಿ ಬೃಹತ್ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದೆ.
ಸೆಲ್ಫಿಗಾಗಿ ಮುಗಿಬಿದ್ದ ಯೂಥ್ಸ್
ಯುವಪೀಳಿಗೆ ಮಹಾದ್ವಾರದ ಎದುರುಗಡೆ ನಿಂತು ಒಂದು ಸೆಲ್ಫಿ (selfie) ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಶಿವಮೊಗ್ಗ ನಗರಕ್ಕೆ ಬಂದವರು ಹಾಗೂ ಗಾಂಧಿ ಬಜಾರಿಗೆ ಆಗಮಿಸಿದವರು ಮಹಾದ್ವಾರದ ಎದುರುಗಡೆ ಒಂದು ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
https://suddikanaja.com/2022/08/31/hindu-mahasabha-ganapati-installed-in-shivamogga/