ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಂಸದ ಬಿ.ವೈ.ರಾಘವೇಂದ್ರ (BY Raghavendra) ಅವರ ನೆಚ್ಚಿನ ಫೋಟೊಗ್ರಾಫರ್ ಹಾಗೂ ಸೋಶಿಯಲ್ ಮೀಡಿಯಾ ಹ್ಯಾಂಡ್ಲರ್ ಆಗಿದ್ದ ಪ್ರಸನ್ನ ಭಟ್ (25) ಭಾನುವಾರ ಮೃತಪಟ್ಟಿದ್ದಾರೆ.
ಹೊಸನಗರ ತಾಲೂಕಿನ ಪ್ರಸನ್ನ ಭಟ್ ಅವರು ಉತ್ಸಾಹಿ ಯುವಕನಾಗಿದ್ದು, ಸಂಸದರ ಸೋಶಿಯಲ್ ಮೀಡಿಯಾ ಹ್ಯಾಂಡ್ಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
READ | ಹೊಸ ವರ್ಷದ ಪಾರ್ಟಿ ವೇಳೆ ಹಾರಿದ ಗುಂಡು, ಫೈರಿಂಗ್ ಮಾಡಿದ ವ್ಯಕ್ತಿಯೇ ಸಾವು
ಕೆರೆಯಲ್ಲಿ ಈಜಲು ಹೋದಾಗ ಘಟನೆ
ಸಂಸದ ಬಿ.ವೈ.ರಾಘವೇಂದ್ರ ಅವರು ಅಧಿವೇಶನದಲ್ಲಿದ್ದು, ಪ್ರಸನ್ನ ಅವರು ರಜೆಯಲ್ಲಿದ್ದ ಕಾರಣದಿಂದಾಗಿ ಕನಕಪುರದಲ್ಲಿದ್ದ ಸ್ನೇಹಿತನ ಮನೆಗೆ ಬಂದಿದ್ದರು. ಮಾವತ್ತೂರು ಕೆರೆಯಲ್ಲಿ ಈಜಲು ಹೋದಾಗ ಪ್ರಸನ್ನ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಭಾನುವಾರ ರಾತ್ರಿ ಶವ ಪತ್ತೆಯಾಗಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತರು, ಬಿಜೆಪಿ ಪಕ್ಷದಿಂದ ಸಂತಾಪ ಸೂಚಿಸಲಾಗಿದೆ.
https://suddikanaja.com/2022/12/31/from-now-on-city-bus-will-not-stop-everywhere-notification-for-117-bus-stops-in-shimoga-city/