ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲೂಕಿನ ಗೊಗ್ಗ ಗ್ರಾಮ(gogga villege)ದಲ್ಲಿ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿಯೇ ಜನರು ‘ವಿಜಯೇಂದ್ರ ಭಾವಿ ಎಂಎಲ್ಎ (Future MLA)’ ಎಂದು ಘೋಷಿಸಿದರು.
VIDEO REPORT
ಗೊಗ್ಗ ಗ್ರಾಮದಲ್ಲಿ ನೂತನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಶಂಕುಸ್ಥಾಪನೆ ಬಳಿಕ ನಡೆದ ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕರೆ ಮಾಡಿದರು. ಫೋನ್ ಕಾಲ್’ನಲ್ಲಿಯೇ ಜನರೊಂದಿಗೆ ವಿಜಯೇಂದ್ರ ಮಾತನಾಡಿದರು. ಈ ವೇಳೆ, ಸಾರ್ವಜನಿಕರು ಭಾವಿ ಎಂಎಲ್ಎ ಎಂದು ಘೋಷಿಸಿದರು. ವಿಜಯೇಂದ್ರ ಕೂಡ ಜನರನ್ನುದ್ದೇಶಿಸಿ ಮಾತನಾಡಿದರು.
READ | 10 ದಿನಗಳಲ್ಲಿ ಎರಡನೇ ಫೈರಿಂಗ್, ಕ್ರಿಮಿನಲ್ಗಳ ಚಳಿ ಬಿಡಿಸುತ್ತಿರುವ ಪೊಲೀಸ್ ಇಲಾಖೆ
ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ವಿತರಣೆ
ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮದಿನಾಚರಣೆ ಪ್ರಯುಕ್ತ ರಾಘವೇಂದ್ರ ಹಾಗೂ ಇತರರು ಸೇರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಪಕ್ಷದ ಮುಖಂಡರು, ವಿವಿಧ ಮೋರ್ಚಾದ ಅಧ್ಯಕ್ಷರು ಸದಸ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.