ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣದಿಂದ ರೈಲುಗಳು ಬರುವ ಹಾಗೂ ಹೊರಡುವ ಸಮಯಕ್ಕೆ ಸರಿಯಾಗಿ ಸಿಟಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಅಣ್ಣಾಹಜಾರೆ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation)ಯ 35 ವಾರ್ಡ್’ಗಳಿಗೆ ಮುಖ್ಯ ರೈಲ್ವೆ ನಿಲ್ದಾಣದಿಂದ ಬಸ್ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
100ರಲ್ಲಿ ಬಂದಿದ್ದು ಬರೀ 65 ಬಸ್!
ಶಿವಮೊಗ್ಗ- ಭದ್ರಾವತಿ ನಗರಗಳಿಗೆ ಕೇಂದ್ರ ಸರ್ಕಾರದಿಂದ ಮಂಜೂರಾದ 100 ಜೆನರ್ಮ್ (JNNURM) ನಗರ ಸಾರಿಗೆ ಬಸ್ ಗಳಲ್ಲಿ ಇದುವರೆಗೆ ಬಂದಿದ್ದು ಬರೀ 65. ಇದರಲ್ಲಿ 36 ಬಸ್ ಗಳು ಶಿವಮೊಗ್ಗ ನಗರದೊಳಗೆ ನಗರ ಸಾರಿಗೆಗೆ ಸಂಬಂಧ ಪಟ್ಟಂತೆ ಬಂದಿರುತ್ತವೆ. ಆದರೂ ನಗರ ವ್ಯಾಪ್ತಿಯೊಳಗೆ ಸಂಚರಿಸಬೇಕಾದ ಬಸ್ ಗಳನ್ನು ಹೊರಗಡೆ ರೂಟ್’ಗಳಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
2013ರ ರಿಂದ ಸಮಿತಿಯು ಸುಮಾರು 30 ಸಲ ವಿವಿಧ ರೀತಿಯ ಹೋರಾಟಗಳನ್ನು ಮಾಡಿದೆ. 2014ರಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆದು ಪರವಾನಗಿ ನೀಡಲು ಜಿಲ್ಲಾಧಿಕಾರಿಗಳು ತೀರ್ಮಾನಿಸಿ ಆರ್’ಟಿಓಗೆ ಆದೇಶಿಸಿದ್ದರು. ಡಿಸಿ ಆದೇಶ ಪಾಲಿಸದೇ ನಗರ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿಲ್ಲ.
|ಡಾ.ಬಿ.ಎಂ.ಚಿಕ್ಕಸ್ವಾಮಿ, ಅಧ್ಯಕ್ಷ, ಅಣ್ಣಾಹಜಾರೆ ಹೋರಾಟ ಸಮಿತಿ
ಸಿಟಿ ಬಸ್’ನಲ್ಲಿದೆ ಸಾಕಷ್ಟು ಕೊರತೆ
ಜೆನರ್ಮ್ ನಗರ ಸಾರಿಗೆ ಬಸ್ಗಳ ಫೂಟ್ ಬೋರ್ಡ್ ಕೆಳಹಂತದಲ್ಲಿದ್ದು, ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಬಸ್ ಹತ್ತಲು ಇಳಿಯಲು ಅನುಕೂಲಕರವಾಗಿಲ್ಲ. ಬಸ್ಸಿನ ಒಳಗಿನ ಆಸನ ವ್ಯವಸ್ಥೆಯೂ ಸಹ ತುಂಬಾ ಅವ್ಯವಸ್ಥಿತವಾಗಿವೆ ಎಂದು ಆರೋಪಿಸಿದ್ದಾರೆ.
READ | ಭತ್ತಕ್ಕೆ ಕಂದು ಹುಳುವಿನ ಬಾಧೆ, ನಿಯಂತ್ರಣಾ ಕ್ರಮಗಳೇನು?
ಆಟೋ ಚಾಲಕರಿಂದ ಅತಿಯಾದ ಹಣ ವಸೂಲಿ
ರೈಲ್ವೆ ನಿಲ್ದಾಣದಿಂದ ಆಟೋ ಚಾಲಕರು ಭಾರೀ ಪ್ರಮಾಣದ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಜಿಲ್ಲಾಡಳಿತ ಮತ್ತು ಆರ್. ಟಿಓ ತಕ್ಷಣವೇ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಿಗೆ ರೈಲು ಬರುವ ಮತ್ತು ಹೊರಡುವ ಸಮಯದಲ್ಲಿ ನಗರ ಸಾಗರಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಕದಿದ್ದರೆ ಧರಣಿ ಸತ್ಯಾಗ್ರಹ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ
ಸಮಿತಿಯ ಪ್ರಮುಖರಾದ ಶಿವಕುಮಾರ್ ಕಸೆಟ್ಟಿ, ಜನಮೇಜಿರಾವ್, ಎಂ.ಎನ್. ಸುಬ್ರಹ್ಮಣ್ಯ, ಆರ್. ಶ್ರೀಕಾಂತ್ ಸೇರಿದಯ ಇತರರು ಉಪಸ್ಥಿತರಿದ್ದರು.