ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಾಹನ ಸವಾರರು ಎಚ್ಚರ ವಹಿಸದಿದ್ದರೆ ಕಾದಿದೆ ಆಪತ್ತು! ಇದಕ್ಕೆ ಕಾರಣ, ರಸ್ತೆ ಬದಿಯಲ್ಲಿ ಹಾಕಿರುವ ರಾಡ್ಸ್!
READ | ಕೋಟೆ ಶ್ರೀಸೀತಾರಾಮಾಂಜನೇಯಸ್ವಾಮಿ ದೇವಸ್ಥಾನದ ಪವರ್ ಕಟ್, ಕತ್ತಲಲ್ಲಿ ಧಾರ್ಮಿಕ ಕ್ಷೇತ್ರ!
ಶಿವಮೊಗ್ಗ- ಭದ್ರಾವತಿಯ ಮುಖ್ಯರಸ್ತೆಯಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲಾಗಿದ್ದು, ಪಿಲ್ಲರ್’ಗಳನ್ನು ತಂದಿಡಲಾಗಿದೆ. ಆದರೆ, ಪಿಲ್ಲರ್’ಗೆ ರಾಡ್ ಗಳಿದ್ದು, ಅವುಗಳನ್ನು ರಸ್ತೆಗೆ ಮುಖವಾಗಿ ಇಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.
ಭದ್ರಾವತಿ ಹೋಗುವಾಗ ರೈಲ್ವೆ ಬ್ರಿಡ್ಜ್ ಗೆ ಬೇಕಾದ ಉದ್ದ ಪಿಲ್ಲರ್ ಇಡಲಾಗಿದೆ. ಅದರಲ್ಲಿ ರಾಡ್ ಗಳು ರಸ್ತೆಯ ಬದಿಯಲ್ಲಿ ಇಡಲಾಗಿದೆ. ಯಾರಾದರೂ ತಪ್ಪಿ ಗುದ್ದಿದ್ದರೆ ಸಾವು ಖಚಿತ.
– ವಾಹನ ಸವಾರ, ಭದ್ರಾವತಿ
ಭದ್ರಾವತಿಯ ಕಡದಕಟ್ಟೆ ಹತ್ತಿರ ಪಿಲ್ಲರ್’ಗಳನ್ನು ಇಟ್ಟಿದ್ದು, ರಾತ್ರಿಯಲ್ಲಿ ವಾಹನಗಳು ಸಂಚರಿಸುವಾಗ ಈ ರಾಡ್’ಗಳು ಕಾಣಿಸುವುದಿಲ್ಲ. ಅಕಸ್ಮಾತ್ ಗುದ್ದಿದ್ದರೆ ಜೀವ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿ ಸಂಬಂಧಪಟ್ಟವರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
‘ಸಿಟಿಜನ್ ವೈಸ್‘ಗೆ ನೀವು ಬರೆಯಿರಿ. ನಿಮ್ಮ ಭಾಗದಲ್ಲೂ ಸಮಸ್ಯೆಗಳಿವೆಯೇ ನಮಗೆ ಬರೆದುಕಳುಹಿಸಿ. ಅದನ್ನು ಆಡಳಿತದ ಗಮನಕ್ಕೆ ತರಲಾಗುವುದು. ಮಾಹಿತಿ ಕಳುಹಿಸುವಾಗ ಈ ವಿಷಯಗಳಿರಲಿ- ಯಾವ ಊರು, ಏನು ಸಮಸ್ಯೆ, ಯಾವಾಗಿಂದ ಈ ಸಮಸ್ಯೆ ಇದೆ? ಇತ್ಯಾದಿ ಮಾಹಿತಿಗಳನ್ನು ನಮ್ಮ ವಾಟ್ಸಾಪ್ ಸಂಖ್ಯೆ 9483130291ಗೆ ಕಳುಹಿಸಿ. ಜೊತೆಗೆ ಚಿತ್ರಗಳೂ ಇರಲಿ.