ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಎಪಿಎಂಸಿ ಮಾರುಕಟ್ಟೆ(APMC Market)ಯ ಅಡಿಕೆ ವರ್ತಕರ ಸಂಘ(arecanut Traders Association)ದ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಅಡಿಕೆ ವರ್ತಕರ ಸಭೆಯನ್ನು ನಡೆಸಿ ಮಹತ್ವದ ಸೂಚನೆಗಳನ್ನು ನೀಡಿದೆ.
READ | ಎಸ್.ಬಿ.ಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ನೀಡಿದ ಸೂಚನೆಗಳೇನು?
- ಅಡಿಕೆ ಮಂಡಿಗಳ ಮಾಲೀಕರು ಮುಂಜಾಗೃತಾ ಕ್ರಮವಾಗಿ ತಮ್ಮ ತಮ್ಮ ಮಂಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ(cctv camera)ಗಳನ್ನು ಅಳವಡಿಸಿಕೊಳ್ಳುವುದು.
- ಅಡಿಕೆಯನ್ನು ಸಾಗಾಟ ಮಾಡುವಾಗ ಮುಂಚಿತವಾಗಿ ವಾಹನಗಳ ಚಾಲಕರು ಮತ್ತು ಸಹಾಯಕರುಗಳ ಪೂರ್ವಾಪರವನ್ನು ಪರಿಶೀಲಿಸಿ ಅವರ ಮಾಹಿತಿಯನ್ನು ಖಚಿತ ಪಡಿಸಿಕೊಂಡ ನಂತರವೇ ಸಾಗಾಟ ಮಾಡುವುದು.
- ಅಡಿಕೆ ಮಂಡಿಗಳಲ್ಲಿ ಸಂಗ್ರಹಿಸಿರುವ ಮತ್ತು ಸಾಗಾಟ ಮಾಡುವ ಅಡಿಕೆಗೆ ವಿಮೆ(insurance)ಯನ್ನು ಮಾಡಿಸುವುದು.
- ಅಡಿಕೆ ಸಾಗಾಟ ಮಾಡುವಾಗ ಟ್ರಾನ್ಸ್ ಪೋರ್ಟ್ ಏಜನ್ಸಿ ಮತ್ತು ಮಾಲೀಕರ ಪೂರ್ವಾಪರವನ್ನು ಪರಿಶೀಲಿಸಿಕೊಳ್ಳುವುದು.
- ಅಡಿಕೆ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಗಳನ್ನು ಅಳವಡಿಸಿಕೊಳ್ಳುವುದು ಅಥವಾ ಜಿಪಿಎಸ್ ಅನ್ನು ಅಳವಡಿಸಿರುವ ವಾಹನಗಳಲ್ಲಿಯೇ ಅಡಿಕೆಯನ್ನು ಸಾಗಾಟ ಮಾಡುವುದು.
- ಯಾವುದೇ ಸಂಶಯ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 9480803300/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವುದು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಡಿವೈಎಸ್.ಪಿ ಉಮೇಶ್, ವಿನೋಬನಗರ, ಕೋಟೆ ಠಾಣೆಯ ಪಿಐಗಳು ಉಪಸ್ಥಿತರಿದ್ದರು.
https://suddikanaja.com/2022/11/29/today-arecacnut-rate-in-karnataka/