Mobile theft | 24 ಗಂಟೆಯೊಳಗೆ ಪ್ರಕರಣ ಬೇಧಿಸಿದ ಪೊಲೀಸ್, ಮೊಬೈಲ್ ಶಾಪಿಗೆ ಕನ್ನ ಹಾಕಿದ ಆರೋಪಿ ಅರೆಸ್ಟ್

CRIME NEWS SK

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಸೊರಬ ರಸ್ತೆಯಲ್ಲಿರುವ ಮೊಬೈಲ್ ಶಾಪ್’ವೊಂದರಲ್ಲಿ ಕಳ್ಳತನ ಮಾಡಿದ್ದಾನೆ ಎನ್ನಲಾದ ಒಬ್ಬ ಆರೋಪಿಯನ್ನು ಪ್ರಕರಣ ದಾಖಲಾದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಸಾಗರ ಪಟ್ಟಣದ ಜೆಪಿ ನಗರದ ಎಂ.ಎಸ್.ವಿನಯ್(24) ಬಂಧಿತ ಆರೋಪಿ. ಈತನ ಬಳಿಯಿಂದ ಅಂದಾಜು ₹71,000 ಮೌಲ್ಯದ 1 ಲ್ಯಾಪ್ ಟಾಪ್ ಮತ್ತು 8 ಮೊಬೈಲ್ ಫೋನ್’ಗಳನ್ನು ವಶಪಡಿಸಿಕೊಳ್ಳಲಾಗಿದೆ.

mobile theft at sagar
ಪೊಲೀಸರು ವಶಕ್ಕೆ ಪಡೆದ ಮೊಬೈಲ್, ಲ್ಯಾಪ್ ಟಾಪ್.

READ | ಕುವೆಂಪು ವಿವಿ ಪಿಜಿ ಪ್ರವೇಶಾತಿ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ, ಆಫ್’ಲೈನ್ ನಲ್ಲೂ ಅವಕಾಶ, ಲಾಸ್ಟ್‌ ಡೇಟ್ ಯಾವುದು?

ಪೊಲೀಸರ ಭರ್ಜರಿ ಕಾರ್ಯಾಚರಣೆ
ನವೆಂಬರ್ 29ರಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಸಾಗರ ಉಪ ವಿಭಾಗದ ಎಎಸ್.ಪಿ ರೋಹನ್ ಜಗದೀಶ್, ಸಾಗರ ಟೌನ್ ಪಿಐ ಸೀತಾರಂ ಮಾರ್ಗದರ್ಶನದಲ್ಲಿ ಡಿ.ಟಿ.ಸಾಗರ್ ಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿ ರತ್ನಾಕರ್, ನಾಗರಾಜ್, ಶ್ರೀಧರ್ ಮತ್ತು ಶಿಲ್ಪಾ ಅವರನ್ನೊಳಗೊಂಡ ತಂಡವು ಪ್ರಕರಣ ವರದಿಯಾದ ಒಂದು ದಿನದ ಒಳಗೆ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಲಯದ ಮುಂದೆ ಹಾಜರುಪಡಿಸಲಾಗಿದೆ.

error: Content is protected !!