ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (The Shimoga District Co-operative Central Bank-
ಡಿಸಿಸಿ) ನಿಂದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ (Yeshasvini health insurance Scheme) ಯನ್ನು ಜಾರಿಗೊಳಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಹೇಳಿದರು.
READ | ಗಮನಿಸಿ, ಮಂಗಳವಾರವೂ ತೆರೆದಿರಲಿದೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಯಡಿ ನೋಂದಣಿಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ. ಇದುವರೆಗೂ ಯಶಸ್ವಿನಿ ವಿಮಾ ಯೋಜನೆಯನ್ನು ಪಡೆಯದಿರುವವರು ತಕ್ಷಣ ಪಡೆಯಬೇಕೆಂದು ಮನವಿ ಮಾಡಿದರು.
ಬ್ಯಾಂಕ್ನಿಂದ ಸುಮಾರು 7,895 ಸ್ವಸಹಾಯ ಗುಂಪು ರಚಿಸಲಾಗಿದೆ. ₹103.20 ಕೋಟಿ ಇವರಿಗೆ ಸಾಲ ನೀಡಲಾಗಿದೆ. ವಸೂಲಾತಿ ಪ್ರಮಾಣ ಶೇ.99.15ರಷ್ಟಿದೆ. ಬ್ಯಾಂಕಿನ ಮೊಬೈಲ್ ಆಪ್ ಕೂಡ ಬಿಡುಗಡೆ ಮಾಡಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂ ಮೆಷಿನ್ ಸೌಲಭ್ಯ ಒದಗಿಸಲಾಗಿದೆ.
– ಎಂ.ಬಿ. ಚನ್ನವೀರಪ್ಪ, ಅಧ್ಯಕ್ಷ, ಡಿಸಿಸಿ ಬ್ಯಾಂಕ್
₹22.99 ಕೋಟಿ ನಿವ್ವಳ ಲಾಭ
ಬ್ಯಾಂಕ್ 2021-22ನೇ ಸಾಲಿನ ಅಂತ್ಯಕ್ಕೆ 22.99 ಕೋಟಿ ನಿವ್ವಳ ಲಾಭ ಗಳಿಸಿದೆ. ₹31.14 ಕೋಟಿ ಲಾಭದಲ್ಲಿ ₹8.15 ಕೋಟಿ ತೆರಿಗೆ ಪಾವತಿಸಿದ್ದೇವೆ. ಒಟ್ಟಾರೆ ಲಾಭ ಗಳಿಕೆಯಲ್ಲಿ ರಾಜ್ಯದಲ್ಲಿಯೇ ದ್ವಿತೀಯ ಹಾಗೂ ಬೆಂಗಳೂರು ಪ್ರಾಂತ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದೇವೆ ಎಂದರು.
ಬ್ಯಾಂಕ್ ₹1244.36 ಕೋಟಿ ಠೇವಣಿ ಸಂಗ್ರಹಿಸಿದೆ. ಷೇರು ಬಂಡವಾಳವೇ ₹129.5 ಕೋಟಿ ಇದೆ. ಒಟ್ಟಾರೆ ₹2517.30 ಕೋಟಿಯಷ್ಟು ವ್ಯವಹಾರ ಮಾಡಿದ್ದೇವೆ. ಇದರ ಜೊತೆಗೆ ₹1,12,445 ರೈತರಿಗೆ ₹1,218.17 ಕೋಟಿ ಕೃಷಿ ಸಾಲ ನೀಡಿದ್ದೇವೆ. ಇದರಲ್ಲಿ 6,546 ಹೊಸ ರೈತರಿದ್ದಾರೆ. ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ 9,995 ರೈತ ಸದಸ್ಯರಿಗೆ ₹86.49 ಕೋಟಿ ಅಲ್ಪಾವಧಿ ಬೆಳೆಸಾಲ ನೀಡಿದ್ದೇವೆ. ಒಟ್ಟಾರೆ ಕೃಷಿ ಮತ್ತು ಕೃಷಿಯೇತರವಾಗಿ ₹1,684.77 ಕೋಟಿ ಸಾಲ ನೀಡಿದ್ದೇವೆ. ಸಾಲದ ವಸೂಲಾತಿ ಶೇ.98.49 ಕೋಟಿ ಇದೆ. ಬ್ಯಾಂಕಿಗೆ ಲೆಕ್ಕಪರಿಶೋಧಕರಿಂದ ‘ಎ’ ಶ್ರೇಣಿ ಸಿಕ್ಕಿದೆ. ಅಪೆಕ್ಸ್ ಬ್ಯಾಂಕಿನವರು ಕೂಡ ನಮಗೆ ‘ಎ‘ ಶ್ರೇಣಿ ನೀಡಿದ್ದಾರೆ ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ, ನಿರ್ದೇಶಕರಾದ ಎಸ್.ಪಿ. ದಿನೇಶ್, ಜೆ.ಪಿ.ಯೋಗೇಶ್, ಪರಮೇಶ್ವರ್, ಜಿ.ಎನ್.ಸುರೇಶ್, ಎಚ್.ಕೆ. ವೆಂಕಟೇಶ್, ದುಗ್ಗಪ್ಪ ಗೌಡ, ಮಧುಸೂದನ್, ಗುರುರಾಜ್, ಸಿಇಒ ನಾಗೇಶ್ ಎನ್. ಡೋಂಗ್ರೆ ಇದ್ದರು.
https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/