Attack | ಹಂದಿ ಅಣ್ಣಿ ಮರ್ಡರ್ ಕೇಸ್, ಜಾಮೀನು ಮೇಲೆ ಹೊರಬಂದವರ ಮೇಲೆ ಅಟ್ಯಾಕ್

CRIME NEWS SK

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುಖ್ಯಾತ ರೌಡಿ ಹಂದಿ ಅಣ್ಣಿ (Hand I Anni) ಕೊಲೆ ಪ್ರಕರಣದ ಆರೋಪಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅದರಲ್ಲಿ ಒಬ್ಬ ಮೃತಪಟ್ಟರೆ, ಇನ್ನೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಗೋವಿನಕೋವಿ ಗ್ರಾಮದ ಬಳಿ ಬುಧವಾರ ನೆತ್ತರು ಹರಿದಿದೆ. ಹರಿಹರ ತಾಲೂಕಿ‌ನ ಭಾನುವಳ್ಳಿ ಗ್ರಾಮದ ಆಂಜನೇಯ ಮೃತಪಟ್ಟಿದ್ದು, ಈತನೊಂದಿಗಿದ್ದ ಮಧು ಗಂಭೀರ ಗಾಯಗೊಂಡಿದ್ದಾನೆ.

READ | ಕೆಲವೇ ಸೆಕೆಂಡ್’ಗಳಲ್ಲಿ ನಡೀತು ಮರ್ಡರ್, ಹಂದಿ ಅಣ್ಣಿ ಕೊಲೆಯ ಬಗ್ಗೆ ತಿಳಿಯಬೇಕಾದ ವಿಷಯಗಳಿವು

ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೊ ಗುಂಡಿಗೊಳಿಸಿ ಪರಾರಿ
ಆಂಜನೇಯ ಮತ್ತು ಮಧು ಹಂದಿ ಅಣ್ಣಿ ಕೊಲೆ‌ ಪ್ರಕರಣದ ಸಂಬಂಧಿಸಿದಂತೆ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿ ಬೈಕಿನಲ್ಲಿ ತಮ್ಮ ಗ್ರಾಮಕ್ಕೆ ವಾಪಸ್ ಹೋಗುತ್ತಿದ್ದರು. ಸ್ಕಾರ್ಪಿಯೋದಲ್ಲಿ ಹಿಂಬಾಲಿಕೊಂಡು ಬಂದು ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಕಾರ್ಪಿಯೋ ಅನ್ನು ಗುಂಡಿಗೆ ಇಳಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ‌.
ಘಟನಾ ಸ್ಥಳಕ್ಕೆ ಪೊಲೀಸರ ದೌಡು
ಗೋವಿನಕೋವಿಯಲ್ಲಿ ಘಟನೆ ನಡೆಯುತ್ತಿದ್ದಂತೆ ದಾವಣಗೆರೆ ಎಸ್.ಪಿ ಸಿ.ಬಿ.ರಿಷ್ಯಂತ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಯಾರು ಈ ಹಂದಿ ಅಣ್ಣಿ?
ಹಂದಿ‌ ಅಣ್ಣಿ ಕುಖ್ಯಾತ ರೌಡಿಯಾಗಿದ್ದು, ಹೆಬ್ಬೆಟ್ ಮಂಜನ ಸಹಚರ ಕೂಡ ಆಗಿದ್ದ, ವಿದೇಶದಲ್ಲೂ ಈತನ ಹವಾ ಇತ್ತು ಎನ್ನಲಾಗುತ್ತದೆ. ಈತ ಲವ ಮತ್ತು ಕುಶ ಕೊಲೆಯ ಮೂಲಕ ಪಾತಕ ಲೋಕಕ್ಕೆ ಬಂದಿದ್ದು, ಬಳಿಕ ನವುಲೆ ಮೋಹನ ಹೀಗೆ ನಾನಾ ಕೊಲೆ ಪ್ರಕರಣಗಳಲ್ಲೂ ಈತ ಕಿಂಗ್ ಪಿನ್ ಆಗಿದ್ದವನು. ಕಳೆದ ವರ್ಷ ಹಂದಿ‌ ಅಣ್ಣಿಯನ್ನು ವಿನೋಬನಗರದ ಪೊಲೀಸ್ ಠಾಣೆಯ ಸಮೀಪವೇ ಹಾಡುಹಗಲೆ‌ ಕೊಲೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಎಂಟು ಜನ ಭಾಗಿಯಾಗಿದ್ದು, ಅದರಲ್ಲಿ ಇಬ್ಬರು ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಅವರ ಮೇಲೆಯೇ ಹಲ್ಲೆ ನಡೆದಿದೆ.

Dog show | ಶಿವಮೊಗ್ಗದಲ್ಲಿ ನಡೆಯಲಿದೆ ಡಾಗ್ ಶೋ, ಯಾವ ಶ್ವಾನಗಳನ್ನು ತರುವಂತಿಲ್ಲ, ಇಲ್ಲಿವೆ 6 ಕಂಡಿಷನ್ಸ್

error: Content is protected !!