ಸುದ್ದಿ ಕಣಜ.ಜಾಂ ಭದ್ರಾವತಿ
BHADRAVATHI: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪ ಮಂಗಳವಾರ ರಾತ್ರಿ ಸಿಡಿಲು ಬಡಿದು ಇಬ್ಬರು ಸಹೋದರರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
READ | ಐಡಿ ಲಿಂಕ್ ಆಗದಿದ್ದರೆ ಸಿಗಲ್ಲ ಪರಿಹಾರ, ಇಲ್ಲಿದೆ ಮಹತ್ವದ ಸೂಚನೆ
ಗೌಳಿಪುರ ಕ್ಯಾಂಪ್ ನಿವಾಸಿ ಬೀರು(32) ಹಾಗೂ ಸುರೇಶ್ (35) ಮೃತರು. ಜಮೀನಿನಲ್ಲಿ ಕಟಾವು ಮಾಡಿ ಹಾಕಲಾಗಿದ್ದ ಭತ್ತದ ರಾಶಿಯನ್ನು ರಕ್ಷಿಸಬೇಕೆಂದು ಇಬ್ಬರು ಜಮೀನಿಗೆ ತೆರಳಿದ್ದಾರೆ. ಆಗ ಸಿಡಿಲು ಬಡಿದಿದೆ. ಜಮೀನಿಗೆ ಹೋದವರು ವಾಪಸ್ ಬಂದಿಲ್ಲ ಎಂಬ ಕಾರಣಕ್ಕೆ ಕುಟುಂಬದವರು ಹುಡುಕಾಡಿದ್ದಾರೆ. ಆಗ ಸಿಡಿಲು ಬಡಿದು ಮೃತಪಟ್ಟರುವುದು ಗಮನಕ್ಕೆ ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಶವಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.