ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯ ವಿವಿಧ ಗೃಹರಕ್ಷಕ ದಳದ ಸದಸ್ಯರಿಗೆ ಹಾಗೂ ಅವರ ಕುಟುಂಬದವರಿಗೆ ಮತ್ತು ಸಾರ್ವಜನಿಕರಿಗೆ ಶಂಕರ ಕಣ್ಣಿನ ಆಡಳಿತ ಮಂಡಳಿಯವರ ಸಹಯೋಗದೊಂದಿಗೆ ಫೆ. 29 ರಂದು ನಗರದ ಪೊಲೀಸ್ ಸಭಾ ಭವನದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
READ | ರಾಜ್ಯದಲ್ಲಿ ಮಂಗನ ಕಾಯಿಲೆ ಸ್ಫೋಟ, ಇಂದು ಎಲ್ಲಿ ಎಷ್ಟು ಜನರಿಗೆ ಸೋಕು?
ದಳದ ಸದಸ್ಯರು ಹಾಗೂ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಠರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂ ಮಾಲೀಕರಿಂದ ಆಕ್ಷೇಪಣೆ ಆಹ್ವಾನ
SHIMOGA: ಭಾರತ್ ಮಾಲಾ ಪರಿಯೋಜನೆ ಅಡಿಯಲ್ಲಿ ಎನ್.ಎಚ್.206ಕ್ಕೆ ಸಂಬಂಧಿಸಿದಂತೆ ನಾಲ್ಕು ಪಥ ನಿರ್ಮಾಣ ಕಾಮಗಾರಿಯು ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗೆ ನಿರ್ವಹಿಸಲು ಈಗಿರುವ 66 ಕೆವಿ., 110 ಕೆವಿ ಹಾಗೂ 220 ಕೆವಿ ಪ್ರಸರಣ ಗೋಪುರಗಳನ್ನು ಸ್ಥಳಾಂತರಿಸಲು/ ಮಾರ್ಪಾಡಿಸಲು ಗೋಪುರ 307, 308, 309, 310 ಗಳ ಜಾಗಕ್ಕೆ ಸಂಬಂಧಿಸಿದ ಶಿವಮೊಗ್ಗ ತಾಲೂಕು ಮಲ್ಲಿಗೇನಹಳ್ಳಿ ಪ್ರದೇಶದ ಭೂ ಮಾಲೀಕರು ಈ ಯೋಜನೆಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು, ಶಿವಮೊಗ್ಗ ವಿಭಾಗ ಇವರ ಕಚೇರಿಗೆ ಈ ಪ್ರಕಟಣೆ ಪ್ರಕಟವಾದ 7 ದಿನಗಳೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.