ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ಬೇಳೂರು ಸಮೀಪದ ಹೆಣ್ಣೆಬೈಲಿನ ಶರಾವತಿ ಹಿನ್ನೀರಿನಲ್ಲಿ ಎತ್ತುಗಳ ಮೈತೊಳೆಯುವಾಗ ರೈತರೊಬ್ಬರು ಕಾಲು ಜಾರಿ ಹಿನ್ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಬೇಳೂರು ಗ್ರಾಮದ ಸುರೇಶ್ (48) ಮೃತ. ಇವರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಎತ್ತುಗಳ ಮೈತೊಳೆಯಬೇಕೆಂದು ಶರಾವತಿ ಹಿನ್ನೀರು ಪ್ರದೇಶಕ್ಕೆ ಬಂದಿದ್ದಾರೆ. ಆಗ ಹಿನ್ನೀರಿಗೆ ಬಿದ್ದಿದ್ದು, ಮೃತಪಟ್ಟಿದ್ದಾರೆ.
ಸುರೇಶ್ ಅವರ ಕಾಲನ್ನು ಗ್ಯಾಂಗ್ರಿನ್ ನಿಂದಾಗಿ ಕತ್ತರಿಸಲಾಗಿತ್ತು. ಹೀಗಾಗಿ, ನೀರಿನಲ್ಲಿ ಬಿದ್ದರೂ ಮೇಲೆ ಬರಲು ಸಾಧದ್ಯವಾಗದೇ ಪ್ರಾಣ ಕಳೆದುಕೊಂಡಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.