ಗಾಂಧಿ ಬಜಾರ್ ನಲ್ಲಿ ಹಲ್ಲೆಗೆ ಒಳಗಾದ ವ್ಯಕ್ತಿ ಸಾವು

CRIME NEWS SK

 

 

ಸುದ್ದಿ ಕಣಜ.ಕಾಂ‌ | DISTRICT | CRIME NEWS
ಶಿವಮೊಗ್ಗ: ಗಾಂಧಿ ಬಜಾರಿನ (Gandhi bazar) ಬಟ್ಟೆ ಮಾರ್ಕೆಟ್ ನಲ್ಲಿ‌ ಮಚ್ಚಿನಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಶುಕ್ರವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

READ | ಚಾಕು ಇರಿತ ಪ್ರಕರಣಕ್ಕೆ‌ ಟ್ವಿಸ್ಟ್, ನಾಲ್ವರ ವಿರುದ್ಧ ಕೇಸ್

ಕುಂಬಾರಗುಂಡಿ ನಿವಾಸಿ ಸೆಂದಿಲ್ ಕುಮಾರ್ (43) ಮೃತ ವ್ಯಕ್ತಿ. ಜೂನ್ 7ರಂದು ರಾತ್ರಿ ಹಲ್ಲೆಗೆ ಒಳಗಾಗಿದ್ದ ಈತನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಗಾಯಗೊಂಡ ಪರಿಣಾಮ ಹೆಚ್ಚುವರಿ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ನಿರಂತರ ಚಿಕಿತ್ಸೆ ಬಳಿಕವೂ ಮೃತಪಟ್ಟಿದ್ದಾನೆ.
ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟ
ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂತೋಷ್, ರಮೇಶ್, ಲೋಕೇಶ್ ಮತ್ತೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರ ಹುಡುಕಾಟ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!