Kuvempu university | ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೃತ್ತಿಯಲ್ಲಿ ಯಶಸ್ಸು ಕಾಣಲು  ಟಾಪ್ 5 ಟಿಪ್ಸ್

Journalism class

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯದ ಆಡಿಯೋ ವಿಷ್ಯುಯಲ್ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಲಸ್ವಾಮಿ ಅವರು ವಿದ್ಯಾರ್ಥಿಗಳಿಗೆ ವೃತ್ತಿಯ ಬಗ್ಗೆ ಟಿಪ್ಸ್ ನೀಡಿದರು.

READ | ಟೈಲರಿಂಗ್, ಡ್ರೆಸ್ ಡಿಸೈನ್ ಉಚಿತ ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು, ಎಷ್ಟು ದಿನಗಳ ಕ್ಲಾಸ್?

ಭಾವಿ ಪತ್ರಕರ್ತರಿಗೆ ನೀಡಿದ ಸಲಹೆಗಳು

  1. ಪತ್ರಿಕೋದ್ಯಮ ವಿದ್ಯಾರ್ಥಿಗಳು ವೃತ್ತಪತ್ರಿಕೆಗಳನ್ನು ಮಾಹಿತಿಗಾಗಿ ಓದುವ ಜೊತೆಗೆ ಅಧ್ಯಯನ ದೃಷ್ಠಿಯಿಂದ ಗಮನಿಸುವುದು ಸೂಕ್ತ.
  2. ಪ್ರತಿಯೊಬ್ಬ ವಿದ್ಯಾರ್ಥಿಯು ಮೊದಲು ಮುದ್ರಣ ಮಾಧ್ಯಮದಲ್ಲಿ ಕೆಲಸ ಆರಂಭಿಸುವುದು ಉತ್ತಮ. ಅಲ್ಲಿ ಅಪಾರವಾದ ಬರವಣಿಗೆ ಕೌಶಲ, ವೃತ್ತಿ ತಂತ್ರಗಳು ಕರಗತ ಮಾಡಿಕೊಳ್ಳಲು ಅವಕಾಶಗಳಿರುತ್ತವೆ.
  3. ಹೊಸ ವಿಚಾರಗಳನ್ನು ಜನರಿಗೆ ಅರ್ಥಪೂರ್ಣವಾಗಿ ತಲುಪಿಸಲು ಕುವೆಂಪು, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿಯಂತಹ ಮೇರು ಸಾಹಿತಿಗಳ ಪುಸ್ತಕಗಳನ್ನು ಓದುತ್ತಿರಬೇಕು.
  4. ಸಾಹಿತ್ಯದ ಓದಿನ ಜೊತೆಗೆ ಪತ್ರಿಕೆಗಳು ರೂಪುಗೊಂಡಿರುವ ಬಗೆ, ಪ್ರವೃತ್ತಿಗಳನ್ನು ಎಚ್ಚರದ ಕಣ್ಣುಗಳಲ್ಲಿ ಗಮನಿಸುತ್ತಿದ್ದರೆ ವೃತ್ತಿಯಲ್ಲಿ ನೆಲೆಯೂರುವುದು, ಯಶ ಕಾಣುವುದು ಸಾಧ್ಯ.
  5. ಪತ್ರಿಕೆಗಳ ಕೆಲಸದಲ್ಲಿ ಗಳಿಸುವ ಆಳವಾದ ಜ್ಞಾನದೊಂದಿಗೆ, ಧೈರ್ಯವಾಗಿ, ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತರೆ ದೃಶ್ಯ ಮಾಧ್ಯಮದಲ್ಲಿ ಭವಿಷ್ಯದಲ್ಲಿ ವಿಫುಲ ಅವಕಾಶಗಳಿವೆ.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಂ.ಆರ್.ಸತ್ಯಪ್ರಕಾಶ್ ಸೇರಿದಂತೆ ಉಪನ್ಯಾಸಕರು, ಸಂಶೋಧನಾರ್ಥಿಗಳು, ತಾಂತ್ರಿಕ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

error: Content is protected !!