ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯ(Kuvempu university)ಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ (Journism & mass communication) ವಿಭಾಗಕ್ಕೆ ‘ದ ನ್ಯೂ ಇಂಡಿಯನ್ ಟೈಮ್ಸ್(The new Indian times)’ ಕೊಡಮಾಡುವ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ಲಭಿಸಿದೆ.
ದ ನ್ಯೂ ಇಂಡಿಯನ್ ಟೈಮ್ಸ್ ಮಾಧ್ಯಮ ಸಂಸ್ಥೆ ಸೋಮವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಟಿಎನ್ಐಟಿ ಮೀಡಿಯಾ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಮಾಧ್ಯಮ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಎಂಬ ಪ್ರಶಸ್ತಿ ನೀಡಲಾಗಿದೆ. ಟಿಎನ್ ಐಟಿ ಮತ್ತು ಸಿರಿ ಕನ್ನಡ ಟಿವಿ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗಿದೆ.
ವೇದಿಕೆಯಲ್ಲಿ ಸುದ್ದಿ ನಿರೂಪಕರಾದ ಚಂದನ್ ಶರ್ಮ, ರಾಘವ್ ಸೂರ್ಯ ಹಾಗೂ ಗಣೇಶ್ ಕಾಸರಗೋಡು ಪ್ರಶಸ್ತಿ ಘೋಷಿಸಿದರು. ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಶಸ್ತಿ ಸ್ವೀಕರಿಸಿದರು.
READ | ಡಿಸಿಸಿ ಬ್ಯಾಂಕ್ ಫಲಿತಾಂಶ ಪ್ರಕಟ
ಯಾವ ಕಾರಣಕ್ಕೆ ಪ್ರಶಸ್ತಿ?
ಕುವೆಂಪು ವಿವಿಯ ಪತ್ರಿಕೋದ್ಯಮ ವಿಭಾಗವು ವಿದ್ಯಾರ್ಥಿಗಳಿಗೆ ಮಾಧ್ಯಮ ಕುರಿತ ಶಿಕ್ಷಣ ಹಾಗೂ ತರಬೇತಿಯಲ್ಲಿ ದಾಪುಗಾಲು ಇಡುತ್ತಿದೆ. “ಕಳೆದ ಇಪ್ಪತ್ತು ವರ್ಷಗಳಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ‘ಸಹ್ಯಾದ್ರಿ ಟೈಮ್ಸ್’ ಹಾಗೂ ಕಳೆದ ಐದು ವರ್ಷದಿಂದ ಟೆಲಿವಿಷನ್ ಸ್ಟುಡಿಯೋ ಸಹಾಯದಿಂದ ವಿದ್ಯಾನ್ಮಾನ ಮಾಧ್ಯಮದ ತರಬೇತಿ ಹಾಗೂ ‘ಸಹ್ಯಾದ್ರಿ ಟಿವಿ’ ಯೂ ಟ್ಯೂಬ್ ಚಾನೆಲ್ ನ ತ್ವರಿತ ಬೆಳವಣಿಗೆಯನ್ನು ಗುರುತಿಸಿ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯ” ಎಂದು ವಿಭಾಗದ ಮುಖ್ಯಸ್ಥ ಡಾ. ಎಂ.ಆರ್.ಸತ್ಯಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
Penalty | ದಂಡ ಪಾವತಿ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ದಿನಾಂಕ ಮತ್ತೆ ಮುಂದೂಡಿಕೆ, ಎಲ್ಲಿಯವರೆಗೆ ಕಾಲಾವಕಾಶ?