ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ (shimoga assembly constituency) ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಬಿಜೆಪಿಯಿಂದ ಎಸ್.ಎನ್.ಚನ್ನಬಸಪ್ಪ (ಚನ್ನಿ) (SN Channabasappa), ಕಾಂಗ್ರೆಸ್’ನಿಂದ ಎಚ್.ಸಿ.ಯೋಗೇಶ್(HC Yogesh), ಜೆಡಿಎಸ್’ನಿಂದ ಆಯನೂರು ಮಂಜುನಾಥ್ ಅಖಾಡದಲ್ಲಿದ್ದಾರೆ. ಅದರಲ್ಲಿ ಯೋಗೇಶ್ ಮತ್ತು ಚನ್ನಿ ಇಬ್ಬರೂ ಕಾರ್ಪೋರೇಟರ್’ಗಳಾಗಿದ್ದವರು. ಇವರ ನಡುವಿನ ಕಾಳಗ ಈಗ ಶಾಸಕ ಸ್ಥಾನಕ್ಕೆ ನಡೆಯಲಿದೆ. ಚನ್ನಬಸಪ್ಪ ಅವರು ಪಾಲಿಕೆ ಆಡಳಿತದ ಬಿಜೆಪಿ ಮೊದಲ ಅವಧಿಯಲ್ಲಿ ಉಪ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಜತೆಗೆ, ಕೆ.ಎಸ್.ಈಶ್ವರಪ್ಪ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದವರಾಗಿದ್ದಾರೆ. ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಅವರಿಗೆ ಟಿಕೆಟ್ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿದೆ.
READ | ಶಿವಮೊಗ್ಗ, ಭದ್ರಾವತಿಯ ಬೆಟ್ಟಿಂಗ್ ಕಿಂಗ್ ಅರೆಸ್ಟ್, ಅವನ ಖಾತೆಯಲ್ಲಿತ್ತು ಲಕ್ಷ ಲಕ್ಷ ರೂಪಾಯಿ
ಯೋಗೇಶ್ ನಾಮಪತ್ರ ಸಲ್ಲಿಕೆ
ಯೋಗೇಶ್ ಅವರು 2007ರಲ್ಲಿ ಸ್ಥಳೀಯ ಸಂಸ್ಥೆ ಸದಸ್ಯನಾಗುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇಬ್ಬರ ನಡುವೆ ಕಾಳಗ ನಡೆಯಲಿದೆ.
ಯೋಗೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದು, ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಹೊರಡಲಿದೆ. ಗಾಂಧಿ ಪಾರ್ಕ್, ಶಿವಪ್ಪ ನಾಯಕ ವೃತ್ತ, ನೆಹರೂ ರಸ್ತೆ ಮೂಲಕ ಪಾಲಿಕೆ ಆವರಣಕ್ಕೆ ತಲುಪಿ ನಾಮಪತ್ರ ಸಲ್ಲಿಸುವರು.
ಈ ನಡುವೆ ಆಯನೂರು ಮಂಜುನಾಥ್ (Ayanur Manjunath) ಜೆಡಿಎಸ್ ನಿಂದ ಸ್ಪರ್ಧಿಸಲಿದ್ದು, ತ್ರಿಕೋನ ಸ್ಪರ್ಧೆ ನಡೆಯಲಿದೆ. ರಾಜಕೀಯದಲ್ಲಿ ಭಾರೀ ಅನುಭವಿ ಹಾಗೂ ನಾಲ್ಕೂ ಮನೆಗಳನ್ನು (ವಿಧಾನಸಭೆ, ವಿಧಾನ ಪರಿಷತ್ತು, ರಾಜ್ಯಸಭೆ ಹಾಗೂ ಲೋಕಸಭೆ) ಪ್ರತಿನಿಧಿಸಿದ್ದಾರೆ.