ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿಧಾನಸಭಾ ಚುನಾವಣೆ (assembly election)2023ಕ್ಕೆ ಸಂಬಂಧಿಸಿದಂತೆ ಏ.16ರಂದು ಕರೆದಿದ್ದ ಸಭೆಗೆ ಗೈರಾದ ಒಟ್ಟು 117 ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ನೋಟಿಸ್ ಜಾರಿ ಮಾಡಿದ್ದಾರೆ.
READ | ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯಿಂದ ಇಂದು ನಾಮಪತ್ರ ಸಲ್ಲಿಕೆ, ಎಲ್ಲಿಂದ ಹೊರಡಲಿದೆ ಮೆರವಣಿಗೆ?
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಿಆರ್ ಓ ಮತ್ತು ಎಪಿಆರ್ ಓ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು. ಈ ತರಬೇತಿಗೆ ಗೈರು ಹಾಜರಾದ ಅಧಿಕಾರಿಗಳಿಗೆ ಡಿಸಿ ಚುರುಕು ಮುಟ್ಟಿಸಿದ್ದಾರೆ.
ಯಾವ ತಾಲೂಕಿನಲ್ಲಿ ಎಷ್ಟು ನೋಟಿಸ್?
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11, ಭದ್ರಾವತಿ 21, ಶಿವಮೊಗ್ಗ ನಗರ 35, ತೀರ್ಥಹಳ್ಳಿ 9, ಶಿಕಾರಿಪುರ 7, ಸೊರಬ 5, ಸಾಗರ 29 ಒಟ್ಟು 117 ಅಧಿಕಾರಿಗಳು ಗೈರಾಗಿದ್ದು, ನೋಟಿಸ್ ಜಾರಿ ಮಾಡಲಾಗಿದೆ.
Lokayukta trap | ಲೋಕಾಯುಕ್ತ ಬಲೆಗೆ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ