ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಜ್ಜಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಅವರನ್ನು ಬಂಧಿಸಲಾಗಿದೆ.
ಟ್ಯಾಕ್ಸಿ ಚಾಲಕ ಗಂಗಾಧರ್ ಎಂಬುವವರಿಗೆ ಸಹಾಯ ಧನ ನೀಡಲು ₹5 ಸಾವಿರ ಲಂಚ ಕೇಳಿದ್ದು, ಅದನ್ನು ಕೊಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
READ | ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಲಿಕಾಪ್ಟರ್ ಪರಿಶೀಲನೆ, ಕರೆಯಲು ಬಂದ ಕಾರನ್ನೂ ಬಿಡದ ಚುನಾವಣೆ ಸಿಬ್ಬಂದಿ
ಗಂಗಾಧರ್ ಅವರು ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ₹3 ಲಕ್ಷ ಸಾಲದ ಮಂಜೂರಾತಿ ಒತ್ರ ಪಡೆದಿದ್ದರು. ಸಹಾಯಧನ ಮಂಜೂರಾತಿ ಪತ್ರ ಬ್ಯಾಂಕಿಗೆ ಕಳುಹಿಸಲು ₹5 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಈಮಿದರ ಬಗ್ಗೆ ವಾಯ್ಸ್ ರೆಕಾರ್ಡಿಂಗ್ ಸಹಿತ ಲೋಕಾಯುಕ್ತರಿಗೆ ದೂರು ನೀಡಿದ್ದರು.