ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಭಾರೀ ಪ್ರಮಾಣದ ಗಾಂಜಾ ಸಾಗಿಸುತಿದ್ದ ಬುಲೆರೋವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಭದ್ರಾವತಿಯ ಮೂವರನ್ನು ಬಂಧಿಸಲಾಗಿದೆ.
ಸುಲ್ತಾನ್ ಮಟ್ಟಿಯ ಕೀರ್ತನ್(19), ಮನೋಜ್ (20) ಮತ್ತು ಲೋಹಿತ್(22) ಬಂಧಿತರು. ಮಧು ಎಂಬಾತ ತಲೆ ಮರೆಸಿಕೊಂಡಿದ್ದಾನೆ. ಅಂದಾಜು ₹3 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಆಂಧ್ರ to ಸುಲ್ತಾನ್ ಮಟ್ಟಿ ಗಾಂಜಾ ಪೂರೈಕೆ
ಆಂಧ್ರದಿಂದ ಭದ್ರಾವತಿಯ ಸುಲ್ತಾನ್ ಮಟ್ಟಿಗೆ ಅಂದಾಜು ₹3 ಲಕ್ಷ ಮೌಲ್ಯದ 20 ಕೆಜಿ ಗಾಂಜಾವನ್ನು ಸಾಗಿಸಲಾಗುತಿತ್ತು. ಆಗ ಗೋಂದಿ ಚೆಕ್ ಪೋಸ್ಟ್ ನಲ್ಲಿ ಬುಲೆರೋ ಅನ್ನು ಪರಿಶೀಲಿಸುವುದಕ್ಕೆ ತಡೆಯಲಾಗಿದೆ. ಆದರೆ, ಪೊಲೀಸರ ನಿರ್ದೇಶನ ಪಾಲಿಸದೇ ಬುಲೆರೋ ಅನ್ನು ಬ್ಯಾರಿಕೆಡ್ ಗೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಪೊಲೀಸರು ವಾಹನ ತಡೆದು ಪರಿಶೀಲಿಸಿದ್ದು 20 ಕೆಜಿ ಗಾಂಜಾ ಇರುವುದು ದೃಢಪಟ್ಟಿದೆ.
ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಲೋಹಿತ್, ಕರ್ತವ್ಯನಿರತ ಪಿ.ಎಸ್.ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ನಂತರ ಅವರನ್ನು ಬಂಧಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.suddikanaja.com/2021/07/16/ganja-sale-accused-arrested/