ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಜರಂಗ ದಳ ಸಹ ಸಂಚಾಲಕನ ಮೇಲೆ ನಡೆದ ಹಲ್ಲೆ ಬೆನ್ನಲ್ಲೆ ಭುಗಿಲೆದ್ದ ಆಕ್ರೋಶ ಹಿನ್ನೆಲೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಹೇರಿ ತಹಸೀಲ್ದಾರ್ ಅವರು ಆದೇಶ ಹೊರಡಿಸಿದ್ದರು. ಅದು ಡಿಸೆಂಬರ್ 9ರವರೆಗೆ ಮುಂದುವರಿಯಲಿದೆ.
ಶನಿವಾರ ಹೊರಡಿಸಿದ ಆದೇಶದಂತೆ, ಡಿಸೆಂಬರ್ 7ರ ಬೆಳಗ್ಗೆ 10ಕ್ಕೆ ನಿಷೇಧಾಜ್ಞೆ ಮುಗಿಯಬೇಕಿತ್ತು. ಆದರೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಡಿಸೆಂಬರ್ 9ರ ವರೆಗೆ ಮತ್ತೆ ಮುಂದೂಡಲಾಗಿದೆ.
ಡಿಸೆಂಬರ್ 3ರ ಮಧ್ಯಾಹ್ನದಿಂದ ಶಿವಮೊಗ್ಗ ನಗರದಲ್ಲಿ 144 ಜಾರಿಯಲ್ಲಿದೆ.
ಇದನ್ನೂ ಓದಿ | ಶಿವಮೊಗ್ಗ ನಗರದಲ್ಲಿ ಸೋಮವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ