ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು ಶ್ರೀರಾಂಪುರ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿ ಕೈಗೆತ್ತಿಕೊಂಡಿದೆ. ಹೀಗಾಗಿ, ಆಲ್ಕೋಳ ವಿದ್ಯುತ್ ವಿತರಣೆ ಕೇಂದ್ರದ ಎಂ.ಎಫ್-13, 19 ಮತ್ತು 12 ಮಾರ್ಗಗಳಲ್ಲಿ ಡಿಸೆಂಬರ್ 20ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕುಂಸಿ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ವಿದ್ಯುತ್ ವ್ಯತ್ಯಯ: ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಬೋವಿ ಕಾಲೊನಿ, ಅಂಬೇಡ್ಕರ್ ನಗರ, ಬೈರನಕೊಪ್ಪ, ಹನುಮಂತನಗರ, ವೆರ್ಟನರಿ ಕಾಲೇಜ್, ಕ್ರಷರ್ಸ್ ವ್ಯಾಪ್ತಿ, ಆಲ್ಕೋಳ ಎಸ್.ಎಲ್.ವಿ.ಲೇಔಟ್, ಜೆ.ಎಚ್.ಪಾಟೀಲ್ ಬಡಾವಣೆ, ಕೆಎಸ್.ಆರ್ಟಿಸಿ ಲೇಔಟ್, ಸಂಗೋಳ್ಳಿ ರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿನಗರ, ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ, ವಿಜಯಲಕ್ಷ್ಮಿ ಲೇಔಟ್, ಎಂ.ಎಂ.ಎಸ್. ಲೇಔಟ್, ಕೆ.ಎಚ್.ಬಿ.ಲೇಔಟ್, ಮಹಾಲಕ್ಷ್ಮಿ ಲೇಔಟ್, ಶಿವಸಾಯಿ ಕ್ಯಾಸ್ಟ್ ಫ್ಯಾಕ್ಟರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.