ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೆಗ್ಗಾನ್ ಜಿಲ್ಲಾಸ್ಪತ್ರೆಯ ಗುತ್ತಿಗೆ ನೌಕರ ಮತ್ತವನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ರಾಜ್ಯ ಹಾಗೂ ಜಿಲ್ಲಾ ಸಾಮಾಜಿಕ ಜಾಲತಾಣ, ಡಿಸಿಸಿ ಮಹಿಳಾ ಪದಾಧಿಕಾರಿ, ಮಹಿಳಾ ಜಾಗೃತಿ ಪಡೆಯಿಂದ ಪ್ರತಿಭಟನೆ ಮಾಡಲಾಯಿತು.
ಗ್ಯಾಂಗ್ ರೇಪ್ ವಿರುದ್ಧ ಸಿಡಿದೆದ್ದ ಶಿವಮೊಗ್ಗ
ಪೈಶಾಚಿಕ ಕೃತ್ಯದ ವಿಷಯವಾಗಿ ಸೂಕ್ತ ತನಿಖೆ ಕೈಗೊಂಡು ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಹಿಳಾ ಇನ್ ಸ್ಪೆಕ್ಟರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಸೌಗಂಧಿಕಾ ರಘುನಾಥ್, ಸ್ಟೆಲ್ಲಾ, ಲಾಲಿ, ಸಂಧ್ಯಾ, ಅರ್ಚನಾ , ರೇಷ್ಮಾ, ಸುವರ್ಣ, ಚಂದ್ರಿಕಾ, ಸಾಮಾಜಿಕ ಜಾಲತಾಣದ ನಗರಾಧ್ಯಕ್ಷ ಸಂಜಯ್, ಅರುಣಾ, ಧನುಷ್, ಆದಿತ್ಯ ಉಪಸ್ಥಿತರಿದ್ದರು.