ಸುದ್ದಿ ಕಣಜ.ಕಾಂ
ದಾವಣಗೆರೆ: ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ `ರೈತರೊಂದಿಗೊಂದು ದಿನ’ ವಿಶಿಷ್ಟ ಕಾರ್ಯಕ್ರಮವನ್ನು ಜನವರಿ 12ರಂದು ಆಯೋಜಿಸಲಾಗಿದೆ ಎಂದು ದಾವಣಗೆರೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಮತ್ತು ಇತರೆ ಸಂಬಂಧಪಟ್ಟ ಇಲಾಖೆಗಳು, ಕೃಷಿ ಸಮಾಜ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ಈ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏನೇನು ಕಾರ್ಯಕ್ರಮ?
- ಶೂನ್ಯ ಬಂಡವಾಳ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ರೈತರ ತಾಕಿಗೆ ಭೇಟಿ ಮತ್ತು ಯಾಂತ್ರೀಕೃತ ಭತ್ತದ ನಾಟಿ ಕಾರ್ಯಕ್ರಮ,
- ರೈತರಿಗೆ ವಿವಿಧ ಬೆಳೆಗಳ, ಆಧುನಿಕ ಬೇಸಾಯ ಪದ್ಧತಿಗಳ ಕುರಿತು ಕೃಷಿ ವಿಜ್ಞಾನಿಗಳಿಂದ ತರಬೇತಿ ಕಾರ್ಯಕ್ರಮ
- ಹಿಂಗಾರು ಬೆಳೆಗಳಲ್ಲಿ ಕ್ರಾಪ್ ಸರ್ವೆ ಆಪ್ ಬಳಕೆ
- ಹಳ್ಳಿ ಕಟ್ಟೆಯಲ್ಲಿ ರೈತರೊಡನೆ ಚರ್ಚೆ
- ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಆಧುನಿಕ ತಾಂತ್ರಿಕತೆಗಳ ಕುರಿತು ವಸ್ತು ಪ್ರದರ್ಶನ
- ಜಿಲ್ಲೆಯ ರೈತರೊಂದಿಗೆ ಸಚಿವರ ಸಂವಾದ ಕಾರ್ಯಕ್ರಮ
- ವಿವಿಧ ರೈತ ಫಲಾನುಭವಿಗಳಿಗೆ ಸಚಿವರಿಂದ ಆಧುನಿಕ ಕೃಷಿ ಯಂತ್ರೋಪಕರಣ
ವಿವಿಧೆಡೆ ಭೇಟಿ: ಬೆಳಗ್ಗೆ 9ರಿಂದ 10.30 ಕಮ್ಮಾರಗಟ್ಟ ಕ್ಷೇತ್ರ ಭೇಟಿ, 10.50ರಿಂದ ಮಧ್ಯಾಹ್ನ 12.15 ಆರುಂಡಿ , 12.20ರಿಂದ 1 ಕೆಂಚಿಕೊಪ್ಪ, 1.10 ರಿಂದ 2 ಕಣದಲ್ಲಿ ರಾಶಿ ಪೂಜೆ, 2ರಿಂದ 2.30 ಭೋಜನದಲ್ಲಿ ವಿರಾಮ, 2.30ರಿಂದ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೃಷಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಚುನಾಯಿತ ಜನಪ್ರತಿನಿಧಿಗಳು, ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.