ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘವು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಧರ್ಮಗುರುಗಳು ಭಾಗವಹಿಸಿದರು.
ಪ್ರತಿಭಾ ಪುರಸ್ಕಾರ, ಯುವಸಂವಾದ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸಿದರು.
ಬಂಜಾರ ಗುರುಪೀಠ ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಕಲಬುರಗಿ ಬಳಿರಾಮ ಮಹಾರಾಜರು, ಲಿಂಗಸೂರಿನ ಸಿದ್ಧಲಿಂಗ ಸ್ವಾಮೀಜಿ, ಹುಬ್ಬಳ್ಳಿಯ ತಿಪ್ಪೇಶ್ವರ ಸ್ವಾಮೀಜಿ, ಹಾವೇರಿಯ ಕುಮಾರ ಸ್ವಾಮೀಜಿ, ಕುಂಚೇನಹಳ್ಳಿಯ ನಾಗರಾಜ್ ಮಹಾರಾಜರು, ಬಾಗಲಕೋಟೆಯ ಕುಮಾರ ಮಹಾರಾಜರು, ಚಳ್ಳಕೆರೆಯ ಶಿವಸಾಧು ಮಹಾರಾಜರು, ಕೊಪ್ಪಳದ ಗೋಸಾಯಿ ಬಾವಾರವರು, ಕೊಟ್ಟೂರಿನ ಶಿವಪ್ರಕಾಶ್ ಮಹಾರಾಜರು, ಕಲಬುರಗಿಯ ವಿಠ್ಠಲ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ದೇಶದ ರಾಜಮಹಾರಾಜರುಗಳಿಗೆ ಆಹಾರ ಸಾಮಾಗ್ರಿಗಳನ್ನು ಹಾಗು ಯುದ್ಧೋಪಕರಣಗಳನ್ನು ಸರಬರಾಜು ಮಾಡುವ ಧೈರ್ಯತನ ಬಂಜಾರರಿಗಿತ್ತು. ಕಾಲಕ್ರಮೇಣ ಬಂಜಾರರು ಸಬಲರಾಗುತ್ತಿದ್ದನ್ನು ಸಹಿಸದ ಕೆಲವರು ವಿನಾಕಾರಣ ಅವರ ಮೇಲೆ ಕ್ರಿಮಿನಲ್ ಟ್ರೈಬಲ್ ಕಾಯ್ದೆ ಜಾರಿಗೆ ತಂದು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನಿಗೆ ಮುಂದಾದರು. ಇದರಿಂದ ಬಂಜಾರರು ಮತ್ತಷ್ಟು ಕುಗ್ಗಿದರು. ಬಂಜಾರರಲ್ಲಿ ದೇಶಕ್ಕಾಗಿ ಹೋರಾಡಿದ ಮಡಿದ ಲೆಕ್ಕವಿಲ್ಲದಷ್ಟು ಅಸಂಖ್ಯಾತ ದೇಶಭಕ್ತರಿದ್ದಾರೆ ಆದರೆ ಅದನ್ನು ಇತಿಹಾಸದಲ್ಲಿ ದಾಖಲಿಸಿಲ್ಲದಿರುವುದು ಈ ದೇಶದ ಅತಿದೊಡ್ಡ ದುರಂತ.
– ಡಾ.ರಾಜಾನಾಯ್ಕ್, ಸಾಮಾಜಿಕ ಕಳಕಳಿ ವೇದಿಕೆಯ ಸಂಸ್ಥಾಪಕ
ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಮಾತನಾಡಿದರು. ಹೃದ್ರೋಗ ತಜ್ಞ ಡಾ.ಗಿರೀಶ್ ಮೂಡ್ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಬಂಜಾರ ರತ್ನ ಪ್ರಶಸ್ತಿ | ಬೆಂಗಳೂರಿನ ಸಾಧನಾ ಕೋಚಿಂಗ್ ಅಕಾಡೆಮಿ ನಿರ್ದೇಶಕರಾದ ಡಾ.ಜ್ಯೋತಿ ರಾಠೋಡ್, ಭದ್ರಾವತಿ ಹಳ್ಳಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಮುಖ್ಯ ಶಿಕ್ಷಕರಾದ ಖೂಬಾನಾಯ್ಕ್, ಮೌಂಟ್ ಎವರೆಸ್ಟ್ ಶಿಖರ ಏರಿದ ಹೊನ್ನಾಳಿ ಚಿಕ್ಕಬಾಸೂರು ತಾಂಡಾದ ವಿಕ್ರಂ, ದೇವರಾಜ್ ಅಂತರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಆಯನೂರು ಶಿವನಾಯ್ಕ್, ಕುವೆಂಪು ವಿವಿಯ ಎಂ.ಎ(ಕನ್ನಡ) ವಿಭಾಗದ ಚಿನ್ನದ ಪದಕ ವಿಜೇತ ರಂಗನಾಥ್, ದಾವಣಗೆರೆ ಚಿನ್ನಸಮುದ್ರದ ಜಾನಪದ ಗಾಯಕ ಉಮೇಶ್ ನಾಯ್ಕ್, ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರುದ್ರಾಕ್ಷಿಬಾಯಿ ಪುಟ್ಟಾನಾಯ್ಕ್, ಕಲಬುರಗಿಯ ಸಾಮಾಜಿಕ ಹೋರಾಟಗಾರ ಪ್ರೇಮ್ ಸಿಂಗ್ ಚವ್ಹಾಣ್ ಅವರಿಗೆ ಜೀವಮಾನ ಸಾಧನೆಗಾಗಿ ‘ಬಂಜಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಹೊನ್ನಾಳಿಯ ನಿವೃತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ್ ನಾಯ್ಕ್ ವಹಿಸಿದ್ದರು.
ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್, ಬಂಜಾರ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಉಷಾ ನಾಯ್ಕ್, ಪಾಲಾಕ್ಷಿ, ಸೂಡಾ ಸದಸ್ಯ ದೇವರಾಜ್ ಮಂಡೇನಕೊಪ್ಪ,
ಕರ್ನಾಟಕ ಕೈಗಾರಿಕಾ ನಿಗಮದ ಮಾಜಿ ಉಪಾಧ್ಯಕ್ಷ ಚೂಡಾನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.