ಸುದ್ದಿ ಕಣಜ.ಕಾಂ
ಸಾಗರ: ಬೈಕ್ ಮತ್ತು ಸೈಕಲ್ ನಡುವೆ ಸೋಮವಾರ ರಾತ್ರಿ ಅಪಘಾತ ಸಂಭವಿಸಿದ್ದು, ಸೈಕಲ್ ಸವಾರ ಮೃತಪಟ್ಟಿದ್ದಾನೆ. ಬೈಕ್ ಸವಾರರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ಮೃತನನ್ನು ತಾಳಗುಪ್ಪ ಗ್ರಾಮದ ಜನಗುಡಿಕೆರಿಯ ಅನಪ್ಪ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನ ಸವಾರನನ್ನು ಸಿದ್ದಾಪುರ ತಾಲೂಕಿನ ಅಜ್ಜುರ್ ಗ್ರಾಮದ ನಿವಾಸಿ ಸುಭಾನ್ ಎನ್ನಲಾಗಿದೆ.
ಹೇಗೆ ನಡೀತು ಅಪಘಾತ | ತಾಳಗುಪ್ಪ ಹೋಬಳಿಯ ಮರತ್ತೂರು ವೃತ್ತದಲ್ಲಿ ಘಟನೆ ನಡೆದಿದೆ. ಮರತ್ತೂರಿನಿಂದ ತಾಳಗುಪ್ಪಕ್ಕೆ ಹೋಗುತ್ತಿದ್ದ ಸೈಕಲ್ ಹಾಗೂ ಸಾಗರದಿಂದ ಸಿದ್ದಾಪುರಕ್ಕೆ ತೆರಳುತ್ತಿದ್ದ ಬೈಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.