ಸುದ್ದಿ ಕಣಜ.ಕಾಂ
ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಟೆಂಪೋ ಸ್ಟಾಂಡ್ ಸಮೀಪ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಯುವಕರ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ನಗರದ ವಸೀಂ ಅಲಿಯಾಸ್ ಕಾಲಾ ವಸೀಂ(19), ವಸೀಂ ಅಕ್ರಂ ಅಲಿಯಾಸ್ ವಸೀಂ (19), ಉಮರ್ ಖಾನ್(19) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿದ್ದು ಅವರನ್ನೂ ವಶಕ್ಕೆ ಪಡೆದು, ಬಾಲ ನ್ಯಾಯಮಂಡಳಿಯ ಅಭಿರಕ್ಷೆಗೆ ನೀಡಲಾಗಿದೆ.
ಐವರು ಸೇರಿ ಶಿವಮೊಗ್ಗ ಮೂಲದ ರಾಕೇಶ್ ಅಲಿಯಾಸ್ ರಾಕಿ (22) ಮತ್ತು ರವಿಕುಮಾರ್ ಅಲಿಯಾಸ್ ಅಭಿ (24) ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.
ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ..
ಡಿವೈಎಸ್.ಪಿ ಉಮೇಶ್ ಈಶ್ವರ್ ನಾಯ್ಕ ಮಾರ್ಗದರ್ಶನದಲ್ಲಿ,
ದೊಡ್ಡಪೇಟೆ ಪಿಐ ವಸಂತ್ ಕುಮಾರ್ ನೇತೃತ್ವದಲ್ಲಿ ಪಿಎಸ್.ಐ ಶಂಕರಮೂರ್ತಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.