ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಂಧದ ಮರವನ್ನು ಕಡಿದು ಸಾಗಿಸುತ್ತಿದ್ದ ಪ್ರಕರಣದಲ್ಲಿ ಮೂವರಿಗೆ 5 ವರ್ಷ ಸಾದಾ ಜೈಲು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಭದ್ರಾವತಿಯ ವಿಐಎಸ್ಎಲ್ ಅಧಿಕಾರಿಗಳ ಕ್ವಾರ್ಟರ್ಸ್ನಲ್ಲಿ ಬೆಳೆಯಲಾಗಿದ್ದ ಗಂಧದ ಮರವನ್ನು ಕಡಿತಲೆ ಮಾಡಿ ಸಾಗಿಸುವಾಗ ಬಂಧಿಸಲಾಗಿತ್ತು.
ಶಿವಮೊಗ್ಗ ನಗರದ ಸಮಿಉಲ್ಲಾ (39), ತೇನ್ ಸಿಂಗ್ (41), ಸ್ಟ್ಯಾನ್ಲಿ (45) ಶಿಕ್ಷೆಗೆ ಗುರಿಯಾದವರು.
2018ರ ಜನವರಿ 9ರಂದು ರಾತ್ರಿ ಮರ ಸಾಗಿಸುವಾಘ ಭದ್ರಾವತಿ ನ್ಯೂಟೌನ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳನ್ನು ಬಂಧಿಸಿ, ಕರ್ನಾಟಕ ಅರಣ್ಯ ಕಾಯಿದೆ ಕಲಂ 84, 85, 86 ಮತ್ತು 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.
ಪಿಎಸ್ಐ ಶಾಂತಲಾ ಮತ್ತು ಸಿ.ಪಿ.ಪ್ರಕಾಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ ಪೀಠಾಸೀನಾ ಭದ್ರಾವತಿ ನ್ಯಾಯಾಲಯದ ನ್ಯಾಯಧೀಶರಾದ ಹೇಮಾವತಿ ಅವರು ಶಿಕ್ಷೆ ವಿಧಿಸಿದ್ದಾರೆ.
ಏನು ಶಿಕ್ಷೆ | ಕಲಂ 379 ಐಪಿಸಿಗೆ 1 ವರ್ಷಗಳ ಸಾದಾ ಶಿಕ್ಷೆ 5 ಸಾವಿರ ರೂ. ದಂಡ. ಒಂದುವೇಳೆ, ದಂಡ ಕಟ್ಟದಿದ್ದರೆ 15 ದಿನಗಳ ಸಾದಾ ಸಜೆ ಹಾಗೂ ಕಲಂ 86 ಅರಣ್ಯ ಕಾಯಿದೆಗೆ ಐದು ವರ್ಷಗಳ ಸಾದಾ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸುವಲ್ಲಿ ತಪ್ಪಿದರೆ 6 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಲಾಗಿದೆ. ಸರಕಾರಿ ಅಭಿಯೋಜಕಿ ರತ್ನಮ್ಮ ಸರಕಾರದ ಪರವಾಗಿ ವಾದ ಮಂಡಿಸಿದರು.