ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಣ್ಣಾನಗರ ಮುಖ್ಯರಸ್ತೆಯಲ್ಲಿರುವ ಕ್ಯಾಂಟೀನ್ ವೊಂದರಲ್ಲಿ ಚಹ ಸೇವಿಸುವಾಗ ಯುವಕರಿಗೆ ಚಾಕು ತೋರಿಸಿ ಬೆದರಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ । ಚಿಕ್ಕಮಗಳೂರಿನ ವ್ಯಕ್ತಿ ಶಿವಮೊಗ್ಗದ ವಿವಿಧೆಡೆ ಮನೆಗಳ್ಳತನ, ಆರೋಪಿ ಬಳಿ ಸಿಕ್ಕ ಚಿನ್ನ, ಬೆಳ್ಳಿ ಎಷ್ಟು ಗೊತ್ತಾ?
ಗಾರೆ ಕೆಲಸ ಮಾಡುವ ನವೀನ್ ರಾಜ್ ಮತ್ತು ಆತನ ಸ್ನೇಹಿತರಿಗೆ ಚಾಕು ತೋರಿಸಿ ಬೆದರಿಸಲಾಗಿದೆ. ಇಬ್ಬರು ವ್ಯಕ್ತಿಗಳು ಬಂದು ಚಾಕು ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಇವರನ್ನು ಚಪ್ಪಡಿ, ಶಫಾನ್ ಎಂದು ಗುರುತಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.