ಸುದ್ದಿ ಕಣಜ.ಕಾಂ
ಸಾಗರ: ಮರದ ಒಣರೆಂಬೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಸಿಗಂದೂರು ರಸ್ತೆಯಲ್ಲಿ ಸಂಜೆ ಪ್ರತೀಕ್ಷಾ ಆಟ ಆಡುವಾಗ ಘಟನೆ ಸಂಭವಿಸಿದೆ. ಪತ್ರೀಕ್ಷಾಳ ಮುಖ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಮೃತಪಟ್ಟಿದ್ದಾಳೆ.
ಫಲ ನೀಡದ ಚಿಕಿತ್ಸೆ | ಗಾಯಗೊಂಡ ಬಾಲಕಿಗೆ ಸಾಗರದಲ್ಲಿರುವ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರತೀಕ್ಷಾ ಕೊನೆ ಉರೆಳೆದಿದ್ದಾಳೆ.
ಪತಿಯನ್ನು ಕಳೆದುಕೊಂಡಿದ್ದ ಪ್ರತೀಕ್ಷಾ ತಾಯಿ | ಆರು ತಿಂಗಳ ಹಿಂದಷ್ಟೇ ಪ್ರತೀಕ್ಷಾಳ ತಾಯಿ ಪ್ರೇಮಾ ಅವರು ತನ್ನ ಪತಿಯನ್ನು ಕಳೆದುಕೊಂಡಿದ್ದರು. ಪ್ರಸ್ತುತ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.