ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ ಒಂದು ತಿಂಗಳು `ಮಹಿಳಾ ಜಾಗೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಇನ್ಮುಂದೆ ವರ್ಷದ 365 ದಿನ ಹಾಲಿ ಡೇ ಆಫರ್, ಎಲ್ಲಿ ಗೊತ್ತಾ?
ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ದಿನಾಚರಣೆ ಈ ವಿನೂತನ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಮಹಿಳೆಯರು ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೇ ಸ್ವಾಭಿಮಾನದ ಬದುಕು ನೀಡುವುದು ನಮ್ಮ ಉದ್ದೇಶವಾಗಿದೆ.
ಇದನ್ನೂ ಓದಿ | 13ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ಸಿದ್ದರಾಮಯ್ಯ, ಡಿಕೆಶಿ, ಖರ್ಗೆ
ಯಾರ ಸನ್ಮಾನ | ಸಮಾಜದ ನಾನಾ ಕ್ಷೇತ್ರಗಳಲ್ಲಿ ತಮ್ಮಷ್ಟಿಗೆ ತಾ ಕೆಲಸ ಮಾಡುತ್ತ ಬದುಕು ಸವೆಸುತ್ತಿರುವ ಸಾಕಷ್ಟು ಮಹಿಳೆಯರಿದ್ದಾರೆ. ಅದರಲ್ಲಿ ಕೊಳಚೆ ಪ್ರದೇಶ, ಹಟ್ಟಿಗಳು, ತಾಂಡಾ, ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರು, ಸಾರಿಗೆ ಸಂಸ್ಥೆಯಲ್ಲಿರುವ ಮಹಿಳಾ ನಿರ್ವಾಹಕಿಯರು, ಪತ್ರಕರ್ತರು, ಡಿಟಿಪಿ ಸೇರಿ ವಿವಿಧ ಹುದ್ದೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ, ಜಾನಪದ ಕಲಾವಿದರು, ಹಸೆ ಚಿತ್ತಾರ, ಡೊಳ್ಳು ಕುಣಿತ ಇಂತಹವರನ್ನು ಗುರುತಿಸಲಾಗುವುದು.
10ರಂದು ಆರೋಗ್ಯ ಶಿಬಿರ | ಮಾರ್ಚ್ 10ರಂದು ಸಾಗರದಲ್ಲಿ ಮಹಿಳೆಯರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ. ನಂತರ ಇದನ್ನು ಜಿಲ್ಲಾದ್ಯಾಂತ ವಿಸ್ತರಿಸಲಾಗುತ್ತದೆ. ವಿಶೇಷವಾಗಿ ಶುಚಿತ್ವದ ಬಗ್ಗೆ ಅರಿವು ಮೂಡಿಸಲಾಗುವುದು. ಮಹಿಳೆಯರ ಋತು ಸಂಬಂಧಿತ ಕಾಯಿಲೆಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ಕಾರ್ಯಕ್ರಮ ಏರ್ಪಡಿಸುವುದು ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಮಹಿಳೆಯರನ್ನು ತಲುಪುತ್ತಿರುವ ಹಾಗೂ ತಲುಪದೇ ಇರುವ ಬಗ್ಗೆ ಗಮನಹರಿಸುವುದು ಹೀಗೆ ಹಲವು ಕಾರ್ಯಕ್ರಮಗಳನ್ನು ನಾವು ಯೋಚಿಸಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ್, ಪ್ರಮುಖರಾದ ಪುಷ್ಪಲತಾ, ಸಿರಿಜಾ, ನಳಿನ, ಗೀತಾ ಸೇರಿದಂತೆ ಹಲವರಿದ್ದರು.