ಸುದ್ದಿ ಕಣಜ.ಕಾಂ
ಭದ್ರಾವತಿ: ನಗರದ ಹುತ್ತಾ ಕಾಲೊನಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಲಕ್ಷಾಂತರ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
READ | ನಕಲಿ ಫೇಸ್ಬುಕ್ ಖಾತೆ ತೆರೆದು, ಯುವತಿಗೆ ಅಶ್ಲೀಲ ಫೋಟೊ ಕಳುಹಿಸಿದ್ದ ವ್ಯಕ್ತಿ ಅರೆಸ್ಟ್
ಭದ್ರಾವತಿ ನಗರ ಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಏತನ್ಮಧ್ಯೆ, ಅಕ್ರಮ ಮದ್ಯ ಸಂಗ್ರಹಿಸಿದ ಬಗ್ಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ಆರೋಪಿ ಹುತ್ತಾ ಕಾಲೊನಿ ನಿವಾಸಿ ಮಲ್ಲಿಕಾರ್ಜುನ್ ಎಂಬಾತ ಪರಾರಿಯಾಗಿದ್ದಾನೆ.
ಚುನಾವಣಾ ಉದ್ದೇಶಕ್ಕಾಗಿ ಸಂಗ್ರಹಿಸಿದ್ದ ಅಂದಾಜು 1.05 ಲಕ್ಷ ರೂಪಾಯಿ ಮೌಲ್ಯದ 107.280 ಲೀಟರ್ ಮದ್ಯ ಮತ್ತು 27.300 ಲೀಟರ್ ಬಿಯರ್ ಅನ್ನು ವಶಕ್ಕೆ ಪಡೆಯಲಾಗಿದೆ.
READ | ಮತ್ತೆ ಭದ್ರಾವತಿಯಲ್ಲಿ ಕೊರೊನಾ ಸ್ಫೋಟ, ಶಿವಮೊಗ್ಗ ನಗರದಲ್ಲಿ ಒಂದು ಸಾವು
ಪೊಲೀಸರ ಮಿಂಚಿನ ಕಾರ್ಯಾಚರಣೆ | ಅಬಕಾರಿ ಉಪ ಆಯುಕ್ತ ಬಿ.ಎ.ಕ್ಯಾಪ್ಟನ್ ಅಜಿತ್ ಕುಮಾರ್ ನಿರ್ದೇಶನದ ಮೇರೆಗೆ ಶುಕ್ರವಾರ ಕಾರ್ಯಾಚರಣೆ ಮಾಡಲಾಗಿದೆ. ತಂಡದಲ್ಲಿ ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ, ಸುನೀಲ್ ಕಲ್ಲೂರ, ಜಿ.ಬಿ.ಮಂಜುನಾಥ್, ಆರ್.ಶ್ರೀನಾಥ್, ರಾಜಮ್ಮ, ಚಂದ್ರಪ್ಪ, ಮಧುಸೂದನ್ ಸೇರಿ ಮತ್ತಿತರರು ದಾಳಿ ನಡೆಸಿದರು. ಆರೋಪಿ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.