ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗೋಪಿಶೆಟ್ಟಿಕೊಪ್ಪ ಆಶ್ರಯ ಮನೆಗಳಿಗೆ ಅರ್ಜಿ ಆಹ್ವಾನಿಸಲಾಗುವುದು. ಅದಕ್ಕೆ ಬಡವರು ಮತ್ತು ಆಶ್ರಯ ಯೋಜನೆ ಅಡಿ ಈ ಹಿಂದೆ ಮನೆಗಳನ್ನು ಪಡೆಯದವರು ಅರ್ಜಿ ಸಲ್ಲಿಸಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಗೋವಿಂದಪುರದಲ್ಲಿ ಮಹಾನಗರ ಪಾಲಿಕೆ ಮತ್ತು ಆಶ್ರಯ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಮಾದರಿ ಆಶ್ರಯ ಮನೆ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1,836 ಮನೆಗಳನ್ನು ಗೋಪಿಶೆಟ್ಟಿಕೊಪ್ಪದಲ್ಲಿ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಶೀಘ್ರವೇ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಗೋವಿಂದಪುರದಲ್ಲಿ 3 ಸಾವಿರಕ್ಕೂ ಅಧಿಕ ಮನೆಗಳ ಸಮುಚ್ಚಯ ನಿರ್ಮಾಣವಾಗುತ್ತಿವೆ. ಅಪಾರ್ಟ್ಮೆಂಟ್ ಗಳಲ್ಲಿ 1 ಬೆಡ್ ರೂಂ, ಅಡುಗೆ ಮನೆ, ಹಾಲ್, ಟಾಯ್ಲೆಟ್, ಬಾತ್ ರೂಂ ವ್ಯವಸ್ಥೆ ಇದೆ. ಜತೆಗೆ, ಯುಜಿಡಿ, ಪಾರ್ಕ್, ತುಂಗಾ ನದಿಯಿಂದ ಕುಡಿಯುವ ನೀರು ಹೀಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಅಂಗವಿಕಲರು, ವಯಸ್ಸಾದವರಿಗೆ ಕೆಳಗಿನ ಮನೆ | ಅಪಾರ್ಟ್ ಮೆಂಟ್ ಗಳಲ್ಲಿ ಕೆಳಗಿನ ಮನೆಗಳಿಗೆ ಅಧಿಕ ಬೇಡಿಕೆ ಇದೆ. ಆದರೆ, ಅವುಗಳನ್ನು ದೈಹಿಕ ಅಂಗವಿಕಲರು ಮತ್ತು ವೃದ್ಧರಿಗೆ ನೀಡಲಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಆಶ್ರಯ ಸಮಿತಿ ಅಧ್ಯಕ್ಷ ಎಚ್.ಶಶಿಧರ್, ಎಸ್.ಎನ್.ಚನ್ನಬಸಪ್ಪ, ಪುರುಷೋತ್ತಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
https://www.suddikanaja.com/2020/10/31/money-palanubhavigala/