ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ವಿಧಿಸಿರುವ ಲಾಕ್ ಡೌನ್ ಮೊದಲ ದಿನ ಯಶಸ್ವಿಯಾಗಿ ಮುಗಿದಿದೆ. ಜನರ ಓಡಾಟ, ಅಂಗಡಿ ಮುಂಗಟ್ಟುಗಳ ಮೇಲೆಯೂ ಬುಧವಾರ ಪೊಲೀಸರು, ಪಾಲಿಕೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದರು. ಇದರ ನಡುವೆಯೂ ಹಲವೆಡೆ ಕದ್ದು ಮುಚ್ಚಿ ವಹಿವಾಟು ನಡೆಯುತ್ತಿದ್ದು, ಇದರ ಮೇಲೆಯೂ ಗುರುವಾರ ಪೊಲೀಸರ ವಕ್ರದೃಷ್ಟಿ ಬೀಳಲಿದೆ.
READ | ಲಾಕ್ ಡೌನ್ ಮೊದಲ ದಿನವೇ ಪೊಲೀಸರ ಭರ್ಜರಿ ಬೇಟೆ, 100 ವಾಹನ ಸೀಜ್, ಲಕ್ಷಾಂತರ ದಂಡ ವಸೂಲಿ
ಗಾಂಧಿ ಬಜಾರ್, ಎನ್.ಟಿ. ರಸ್ತೆ, ದುರ್ಗಿಗುಡಿ ಮತ್ತಿತರ ಭಾಗಗಳಲ್ಲಿ ಬೆಳಗ್ಗೆ 6 ರಿಂದ 10 ಗಂಟೆಯ ಅವಧಿಯಲ್ಲಿ ಅಗತ್ಯ ವಸ್ತುಗಳ ಹೊರತಾಗಿಯೂ ಅಂಗಡಿಗಳನ್ನು ಬುಧವಾರ ತೆರೆಯಲಾಗಿತ್ತು. ಇದರೆಡೆಗೂ ಅಧಿಕಾರಿಗಳು ಗಮನ ಹರಿಸಲಿದ್ದಾರೆ.
READ | ಒಂದೇ ದಿನ ಐವರ ಬಲಿ ಪಡೆದ ಕೊರೊನಾ, ಎಲ್ಲೆಲ್ಲಿ ಸಾವು ಇಲ್ಲಿದೆ ಡಿಟೇಲ್ಸ್, ಮೂರು ಹೊಸ ದಾಖಲೆ ಸೃಷ್ಟಿ
ವಿಶೇಷವಾಗಿ ಎಪಿಎಂಸಿ ತರಕಾರಿ ಮಾರ್ಕೆಟ್ ನಲ್ಲಿ ಬುಧವಾರ ಬೆಳಗ್ಗೆ ನೂಕು ನುಗ್ಗಲು, ವರ್ತಕರು ಮತ್ತು ಪಾಲಿಕೆ ಅಧಿಕಾರಿಗಳ ನಡುವೆ ವಾಕ್ಸಮರ ನಡೆದಿದೆ. ಇದೆಲ್ಲವೂ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಹೀಗಾಗಿ, ತರಕಾರಿ ಮಾರ್ಕೆಟ್ ಮೇಲೆ ಗುರುವಾರ ಬೆಳಗ್ಗೆ ವಿಶೇಷ ನಿಗಾ ವಹಿಸುವ ಸಾಧ್ಯತೆ ಇದೆ.
ಲಾಕ್ ಡೌನ್ ಮೊದಲ ದಿನ ಎಂಬ ಕಾರಣಕ್ಕೆ ಕೆಲವೊಂದು ವಿಚಾರಗಳಲ್ಲಿ ಪೊಲೀಸರು ಸುಮ್ಮನಿದ್ದರು. ಆದರೆ, ಎರಡನೇ ದಿನ ನಿಯಮಗಳು ಇನ್ನಷ್ಟು ಕಠಿಣವಾಗಿ ಕಾರ್ಯರೂಪಕ್ಕೆ ಬರಲಿವೆ. ಖುದ್ದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್.ಪಿ ಲಕ್ಷ್ಮೀಪ್ರಸಾದ್, ಎಎಸ್.ಪಿ ಎಚ್.ಟಿ.ಶೇಖರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೇ ಫೀಲ್ಡಿಗೆ ಇಳಿಯುತ್ತಿರುವುದರಿಂದ ಪೊಲೀಸ್ ಸಿಬ್ಬಂದಿ ಇನ್ನಷ್ಟು ಜಾಗೃತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಒಂದುವೇಳೆ, ಬೆಳಗ್ಗೆ 6 ರಿಂದ 10 ಗಂಟೆಯ ಅವಧಿಯಲ್ಲಿ ಹೊರಗಡೆ ಬಂದಾಗ ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರ ಕಾಪಾಡದೇ ಹೋದರೂ ದಂಡ ಬೀಳಲಿದೆ. ಇದಕ್ಕೋಸ್ಕರವೇ ಪಾಲಿಕೆ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ.
https://www.suddikanaja.com/2021/04/28/food-distribution-by-youth-congress/