ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕುಂಸಿ ಸಮೀಪ ಬುಧವಾರ ಎರಡು ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ ಇಬ್ಬರು ಬೈಕ್ ಸವಾರರೇ ಮೃತಪಟ್ಟಿದ್ದಾರೆ.
READ | ಹೇಗಿದೆ ಮೊದಲ ದಿನದ ನೈಟ್ ಕರ್ಫ್ಯೂ?
ಆಯನೂರು ಬಳಿ ಬಸ್ ಹಾಗೂ ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಚಾಲಕನಾದ ಜಫರುಲ್ಲಾ(35) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ಮೂಲತಃ ರಾಮನಗರದ ನಿವಾಸಿಯಾಗಿದ್ದು, ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ. ರಾಮನಗರದಿಂದ ಶಿವಮೊಗ್ಗಕ್ಕೆ ಹೋಗುವಾಗ ಘಟನೆ ನಡೆದಿದೆ.
ಆಸ್ಪತ್ರೆಗೆ ಹೋಗುವಾಗ ಸಾವು | ಇನ್ನೊಂದು ಅಪಘಾಥ ಹಾರನಹಳ್ಳಿ ಸಮೀಪ ನಡೆದಿದೆ. ಬೈಕ್ ಒಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದ್ದು, ವಿಠಗೊಂಡನಕೊಪ್ಪ ನಿವಾಸಿ ಶೋಭಾ (35) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲಕನಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.