ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾನುವಾರಕ್ಕೆ ನಾಲ್ಕು ದಿನಗಳ ಕಠಿಣ ಲಾಕ್ ಡೌನ್ ಪೂರ್ಣಗೊಂಡಿದೆ. ಹೀಗಾಗಿ, ಸೋಮವಾರದಿಂದ ವ್ಯಾಪಾರ ವಹಿವಾಟು, ಸಾರ್ವಜನಿಕರ ಸಂಚಾರ ಸಹಜ ಸ್ಥಿತಿಯಲ್ಲಿ ಸಾಗಿದೆ.
https://www.suddikanaja.com/2021/05/13/covid-treatment/
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಸ್ಥಳೀಯ ವ್ಯಾಪಾರಿಗಳ ಸಹಮತದೊಂದಿಗೆ ಗುರುವಾರದಿಂದ ಭಾನುವಾರದವರೆಗೆ ಕಠಿಣ ಲಾಕ್ ಡೌನ್ ಗೆ ಮುಂದಾಗಿತ್ತು. ಹೀಗಾಗಿ, ಸಗಟು ವ್ಯಾಪಾರ, ಎಪಿಎಂಸಿ ಇತರರು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ನಾಲ್ಕು ದಿನಗಳ ಬಳಿಕ ಸಗಟು ವ್ಯಾಪಾರ, ಎಪಿಎಂಸಿ ಸಹಜ ಸ್ಥಿತಿಗೆ ಮರಳಿವೆ.
ಬ್ಯಾಂಕ್ ಕೂಡ ಶೇ.30 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆಗೆ ಮುಂದಾಗಿತ್ತು. ಸೋಮವಾರದಿಂದ ರಾಜ್ಯ ಸರ್ಕಾರದ ಮಾಗರ್ಸೂಚಿ ಪ್ರಕಾರ, ಶೇ.50ರಷ್ಟು ಕರ್ತವ್ಯಕ್ಕೆ ಹಾಜರು ಆಗಲಿದ್ದಾರೆ.
ಎಪಿಎಂಸಿ ಬಂದ್ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ಕೂಡ ಸಿಗುತ್ತಿರಲಿಲ್ಲ. ಆದರೆ, ಸೋಮವಾರ ಎಲ್ಲೆಡೆ ತಾಜಾ ತರಕಾರಿ ಲಭ್ಯವಿದ್ದು ಜನರು ಖರೀದಿಗೆ ಮುಗಿಬಿದ್ದರು. ಬೆಳಗ್ಗೆ 10ರ ಹೊತ್ತಿಗೆ ಎಲ್ಲ ತರಕಾರಿ ಅಂಗಡಿಗಳು ಖಾಲಿಯಾದವು.
https://www.suddikanaja.com/2021/05/09/retail-sale-ban-in-apmc-shivamogga/