ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾಡಳಿತ ಮತ್ತೊಮ್ಮೆ ಕೊರೊನಾ ತಡೆಗೆ ಕಠಿಣ ನಿರ್ಧಾರ ಕೈಗೊಂಡಿದೆ. ಅದರನ್ವಯ, ನಿನ್ನೆ (ಭಾನುವಾರ) ಪೂರ್ಣಗೊಂಡ ಕಂಪ್ಲೀಟ್ ಲಾಕ್ ಡೌನ್ ಅನ್ನು ಮತ್ತೆ ಮುಂದುವರಿಸಲಾಗಿದೆ.
ಈ ಸಂಬಂಧ ಜಿಲ್ಲಾಡಳಿತ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಿರ್ಧಾರವನ್ನು ಪ್ರಕಟಿಸಿದ್ದಾರೆ.
READ | ನಾಲ್ಕು ದಿನಗಳ ಕಠಿಣ ಲಾಕ್ ಡೌನ್ ಬಳಿಕ ಹೇಗಿದೆ ಶಿವಮೊಗ್ಗ, ಜನಸಂಚಾರ, ವಹಿವಾಟು ಇದೆಯೇ?
ಮಂಗಳವಾರ ಬೆಳಗ್ಗೆಯಿಂದಲೇ ಇದು ಅನ್ವಯವಾಗಲಿದ್ದು, ಬೆಳಗ್ಗೆ 7 ಗಂಟೆಯವರೆಗೆ ಎಪಿಎಂಸಿ ಹಾಗೂ ಬೆಳಗ್ಗೆ 9 ಗಂಟೆಯವರೆಗೆ ದನಸಿ ಅಂಗಡಿಗಳು ತೆರೆದಿರಲಿವೆ. ಅದರೊಳಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ.
ಬರುವ ಭಾನುವಾರದವರೆಗೆ ಈ ಆದೇಶದನ್ವಯ ನಗರದಲ್ಲಿ ಲಾಕ್ ಡೌನ್ ಇರಲಿದೆ. ಹೀಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
https://www.suddikanaja.com/2021/05/11/shivamogga-city-complete-lockdown-for-four-days/
ದಿನಸಿ, ಎಪಿಎಂಸಿ ಹಾಗೂ ವೈದ್ಯಕೀಯ, ಫಾರ್ಮಾ ಹೀಗೆ ಅತ್ಯಗತ್ಯವಿರುವ ಕೈಗಾರಿಕೆಗಳನ್ನು ಮಾತ್ರ ಕಾರ್ಯನಿರ್ವಹಿಸಲು ಒಪ್ಪಿಗೆ ನೀಡಲಾಗಿದೆ. ಇನ್ನುಳಿದಂತೆ, ಎಲ್ಲವೂ ಬಂದ್ ಇರಲಿವೆ. ಎಂದಿನಂತೆ, ಮೆಡಿಕಲ್, ಆಸ್ಪತ್ರೆಗಳಿಗೆ ಈ ನಿಯಮ ಅನ್ವಯ ಆಗುವುದಿಲ್ಲ.
ನಾಲ್ಕು ದಿನ ಲಾಕ್ ಡೌನ್ ಮಾದರಿ | ಕಳೆದ ಗುರುವಾರದಿಂದ ಭಾನುವಾರದವರೆಗೆ ಯಾವ ರೀತಿಯಲ್ಲಿ ಲಾಕ್ ಡೌನ್ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಮಂಗಳವಾರದಿಂದ ಭಾನುವಾದವರೆಗೆ ಲಾಕ್ ಡೌನ್ ಇರಲಿದೆ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2020/12/26/smart-classes-in-all-government-schools-in-karnataka/