ಸುದ್ದಿ ಕಣಜ.ಕಾಂ
ಶಿವಮೊಗ್ಗ: ದಿನೇ ದಿನ ಕೊರೊನಾ ಪ್ರಕರಣಗಳು ನಗರದಲ್ಲಿ ಏರಿಕೆಯಾಗುತಿದ್ದು, ಮುಂಜಾಗ್ರತಾ ಕ್ರಮವಾಗಿ ಆಯಾ ಬಡಾವಣೆಯವರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಗೆ ಮುಂದಾಗುತ್ತಿದ್ದಾರೆ.
READ | ಕೊರೊನಾ ಅಟ್ಟಹಾಸ, ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ
ಇಲ್ಲಿನ ಕಾಶೀಪುರದಲ್ಲಿ 200 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕು ತಡೆಯುವುದಕ್ಕಾಗಿ ಬಡಾವಣೆಯ ಜನರು ಸ್ವಯಂ ನಿರ್ಬಂಧಕ್ಕೆ ಮುಂದಾಗಿದ್ದಾರೆ.
ಕಾಶೀಪುರ ಬಡಾವಣೆಯ ಮುಖ್ಯ ದ್ವಾರವನ್ನು ಬಂದ್ ಮಾಡಲಾಗಿದ್ದು, ಬೇರೆಯ ಬಡಾವಣೆಗಳಿಗೆ ಸಾರ್ವಜನಿಕರ ಆಗಮನವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಈ ಮೂಲಕ ಸೋಂಕು ತಡೆಗೆ ಬಡಾವಣೆಯ ನಿವಾಸಿಗಳೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.