ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ಬಜಾರ್ ಪ್ರದೇಶದಲ್ಲಿ ಕಾರು, ಬೈಕ್ ಮತ್ತು ಆಟೋಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
https://www.suddikanaja.com/2021/05/20/car-glass-piece-piece-in-surrounding-gandhi-bazar-area/
ಕೆ.ಆರ್.ಪುರಂ ನಿವಾಸಿ ಶಾಹಿಲ್ ಖಾನ್(21), ಭರ್ಮಪ್ಪ ನಗರ ನಿವಾಸಿ ಮನ್ಸೂರ್ ಅಹಮ್ಮದ್(32) ಎಂಬುವವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ದೊಡ್ಡಪೇಟೆ ಪೊಲೀಸರು ಆರೋಪಿಗಳ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 6, ಕೋಟೆಯಲ್ಲಿ 1 ಸೇರಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಗಳು ದಾಖಲಾಗಿವೆ. ಇದನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ಕೃತ್ಯದ ಹಿಂದೆ ಇರುವ ವ್ಯಕ್ತಿಗಳ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ.
ವಾಹನ ಜಖಂಗೊಳಿಸಿ ಚಾಕು ತೋರಿಸಿದ್ದರು |ವಾಹನಗಳನ್ನು ಜಖಂಗೊಳಿಸಿದ್ದಲ್ಲದೇ ಆರೋಪಿಗಳು ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ.
ಘಟನೆಯಲ್ಲಿ 12 ಕಾರು , 1 ಆಟೋ ಮತ್ತು 5 ದ್ವಿಚಕ್ರ ವಾಹನಗಳ ಕಿಟಕಿ, ಹಿಂಬದಿಯ ಗ್ಲಾಸ್, ಬೈಕ್ ಗಳ ಹೆಡ್ಮಾಸ್ಕ್ ಹಾಗೂ ಹೆಡ್ ಲೈಟ್ ಗಳನ್ನು ಪುಡಿ ಮಾಡಲಾಗಿದೆ.
https://www.suddikanaja.com/2021/01/25/dial-112-launched-by-shivamogga-police-department/