ಸುದ್ದಿ ಕಣಜ.ಕಾಂ
ಶಿವಮೊಗ್ಗ: ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ) ಅನ್ನು ಐಚ್ಚಿಕ ವಿಷಯವಾಗಿ ಮಾನ್ಯತೆ ನೀಡಲಾಗಿದ್ದು, ಪದವಿ ಮತ್ತು ಸ್ನಾತಕೋತ್ತರದಲ್ಲಿ ಎನ್.ಸಿ.ಸಿಯನ್ನು ಐಚಿಕ ವಿಷಯವಾಗಿ ಅಳವಡಿಕೆ ಮಾಡಲು ವಿಶ್ವವಿದ್ಯಾಲಯ ಕುಲಪತಿಗಳಿಗೆ ನಿರ್ದೇಶನ ನೀಡಲಾಗಿದೆ.
ವಿದ್ಯಾರ್ಥಿ ಸಮೂಹವನ್ನು ಎನ್.ಸಿ.ಸಿಯೆಡೆಗೆ ಆಕರ್ಷಿಸುವಲ್ಲಿ ಮತ್ತು ಅತ್ಯುತ್ತಮ ಪ್ರತಿಭೆಗಳನ್ನು ನಿರ್ಮಿಸುವಲ್ಲಿ ಎನ್.ಸಿ.ಸಿ.ಯನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ ಎಂದು ಶಿವಮೊಗ್ಗ 20 ಕರ್ನಾಟಕ ಬಿ.ಎನ್.ಎನ್.ಸಿ.ಸಿ. ಪ್ರಕಟಣೆಯಲ್ಲಿ ತಿಳಿಸಿದೆ.
ಭವಿಷ್ಯದ ದಿನಗಳಲ್ಲಿ ಗಡಿ ಪ್ರದೇಶಗಳ ವಿಸ್ತರಣೆ ಯೋಜನೆಯ ಭಾಗವಾಗಿ ಹೆಚ್ಚುವರಿ ಕೆಡೆಟ್ ಬಲವನ್ನು ಅಧಿಕೃತಗೊಳಿಸಿದ ಕರಾವಳಿ ಪ್ರದೇಶಗಳನ್ನು ಒಳಗೊಂಡಂತೆ ಕೆಡೆಟ್ಗಳಿಗೆ ಭವಿಷ್ಯದ ಪ್ರಯೋಜನವಿದೆ ಎಂದು ತಿಳಿಸಲಾಗಿದೆ.
ನವದೆಹಲಿಯ ಡೈರೆಕ್ಟರೇಟ್ ಜನರಲ್ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಮಂಡಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ಎನ್.ಸಿ.ಸಿಯಲ್ಲಿ ಜನರಲ್ ಎಲೆಕ್ಟಿವ್ ಕ್ರೆಡಿಟ್ ಕೋರ್ಸ್ ಎಂದು ಪರಿಚಯಿಸಲು ಯು.ಜಿ.ಸಿ. ಎಲ್ಲ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದ್ದಾರೆ.
https://www.suddikanaja.com/2021/04/24/smh-covid-update/
ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ |ಎನ್.ಸಿ.ಸಿ.ಯನ್ನು ಐಚ್ಚಿಕ ವಿಷಯವಾಗಿ ಶೀಘ್ರದಲ್ಲಿ ಅನುಷ್ಠಾನಗೊಳಿಸಲು ಎನ್.ಸಿ.ಸಿ. ನಿರ್ದೇಶನಾಲಯ ಕರ್ನಾಟಕ ಮತ್ತು ಗೋವಾಗಳು ಒಗ್ಗಟ್ಟಿನ ಪ್ರಯತ್ನಗಳನ್ನು ಆರಂಭಿಸಿವೆ.
ಕೆಡೆಟ್ಗಳಿಗೆ ವಿಶೇಷವಾಗಿ ಬಿ ಮತ್ತು ಸಿ ಪ್ರಮಾಣ ಪತ್ರವನ್ನು ಪರೀಕ್ಷೆಗಳಲ್ಲಿ ಹಾಜರಾಗುವವರಿಗೆ ಒಂದು ಪ್ರಮುಖ ಪ್ರಯೋಜನವನ್ನು ನೀಡುತ್ತದೆ. ಇದನ್ನು ಎರಡರಿಂದ ಐದು ವರ್ಷಗಳ ನಿಗದಿತ ತರಬೇತಿ ಅವಧಿಯ ನಂತರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಮಾಣಪತ್ರಗಳು ಪ್ರವೇಶದಲ್ಲಿ ಮೀಸಲಾತಿಯಿಂದ ಉನ್ನತ ಶಿಕ್ಷಣದ ಸಂಸ್ಥೆ, ಸರ್ಕಾರಿ ಸಂಸ್ಥೆ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವವರಿಗೆ ಹಲವಾರು ಸವಲತ್ತುಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
https://www.suddikanaja.com/2020/12/31/grama-panchayat-new-elected-members-training-program/
ಸಿಬಿಎಸ್.ಸಿ ಅನ್ವಯ ವಿನ್ಯಾಸ | ಬಿ ಮತ್ತು ಸಿ ಪ್ರಮಾಣ ಪತ್ರಗಳಿಗಾಗಿ ಎನ್.ಸಿ.ಸಿ. ಪಠ್ಯಕ್ರಮವನ್ನು ಎನ್.ಇ.ಪಿ. 2020ರ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್(ಸಿ.ಬಿ.ಎಸ್.ಸಿ.) ಪ್ರಕಾರ ವಿನ್ಯಾಸಗೊಳಿಸಲಾಗಿದೆ.
ಈ ತರಬೇತಿ 6 ಸೆಮಿಸ್ಟರ್ಗಳನ್ನು ಹೊಂದಿದ್ದು, 24 ಕ್ರೆಡಿಟ್ ಪಾಯಿಂಟ್ಗಳನ್ನು ನೀಡುತ್ತದೆ. ಅದರಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲ 2 ಸೆಮಿಸ್ಟರ್ಗಳಲ್ಲಿ ನಾಲ್ಕು ಕ್ರೆಡಿಟ್ ಮತ್ತು 10 ಕ್ರೆಡಿಟ್ಗಳನ್ನು ಪಡೆಯಬಹುದಾಗಿದೆ. ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ನಲ್ಲಿ ಹಾಗೂ ಐದು ಮತ್ತು ಆರನೇ ಸೆಮಿಸ್ಟರ್ನಲ್ಲಿ ಹತ್ತು ಕ್ರೆಡಿಟ್ಗಳು ಮುಂಬರುವ
ಶೈಕ್ಷಣಿಕ ಅಧಿವೇಶನದಿಂದ ಯೋಜಿಸಲಾಗುತ್ತಿರುವ ಉದ್ದೇಶಿತ ಅನುಷ್ಠಾನವು ರಾಜ್ಯ ಸರ್ಕಾರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೂರದೃಷ್ಟಿಯ ಹೆಜ್ಜೆ ಎಂದು ಬಣ್ಣಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/01/19/job-fair-in-shivamogga-2/