ಸುದ್ದಿ ಕಣಜ.ಕಾಂ
ಶಿವಮೊಗ್ಗ: ಐದು ಕಡೆ ಮನೆಯಲ್ಲಿನ ಚಿನ್ನಾಭರಣ ಲೂಟಿ ಮಾಡಿ ತಲೆ ಮರಿಸಿಕೊಂಡಿದ್ದ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
https://www.suddikanaja.com/2020/12/25/man-arrested-in-sagar-for-theft-in-house/
ಆಟೋ ಕಾಂಪ್ಲೆಕ್ಸ್ ನಿವಾಸಿ ಜಬೀವುಲ್ಲಾ(21), ಬೊಮ್ಮನಕಟ್ಟೆಯ ಮಹಮ್ಮದ್ ಶಾಬಾಜ್(19), ಟಿಪ್ಪುನಗರದ ಆದಿಲ್(20) , ರಾಗಿಗುಡ್ಡದ ಮಹಮ್ಮದ್ ಕರೀಮ್(19), ಟಿಪ್ಪುನಗರದ ಸೈಯ್ಯದ್ ಯುನಸ್(20) ಬಂಧಿತರು. ಆರೋಪಿಗಳಿಂದ 2,33,500 ರೂಪಾಯಿ ಮೌಲ್ಯದ 52 ಗ್ರಾಂ 60 ಮಿ.ಲಿ ತೂಕದ ಬಂಗಾರದ ಆಭರಣ ಹಾಗೂ 6,500 ರೂಪಾಯಿ ಮೌಲ್ಯದ 113 ಗ್ರಾಂ 900 ಮಿ.ಲಿ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸಿಕ್ಕಿದ್ದು ಹೇಗೆ | ಬೀರನಕೆರೆ ಗ್ರಾಮದ ನಿವಾಸಿ ಪರಶುರಾಮಪ್ಪ ಎಂಬುವವರು ಸಕ್ರೆಬೈಲಿನಲ್ಲಿರುವ ಮಗನ ಮನೆಗೆ ಹೋದಾಗ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಮನೆಯ ಬೀಗವನ್ನು ಮುರಿದು ಒಳಗಡೆ ಬೀರುವಿನಲ್ಲಿ ಇಟ್ಟಿದ್ದ 20 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 10,000 ರೂಪಾಯಿ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಐಪಿಸಿ ಕಲಂ 457, 380 ಅನ್ವಯ ಪ್ರಕರಣವನ್ನು ಗ್ರಾಮಾಂತರ ಠಾಣೆಯಲ್ಲಿ ದಾಖಲಿಸಲಾಗಿತ್ತು.
ತನಿಖೆ ಕೈಗೊಂಡ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಯ ತಂಡ ಆರೋಪಿಗಳನ್ನು ಬಂಧಿಸಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಒಟ್ಟು 5 ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
https://www.suddikanaja.com/2021/05/13/police-arrested-thieves/