ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಖೋಲೋ ಇಂಡಿಯಾ ಸಂಸ್ಥೆಗೆ ವಿಶೇಷ ಕ್ರೀಡಾ ತರಬೇತಿಗೋಸ್ಕರ ಭೂಮಿ ನೀಡುವುದನ್ನು ವಿರೋಧಿಸುವವರಿಗೆ ಮಾಹಿತಿಯ ಕೊರತೆ ಇರಬಹುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
https://www.suddikanaja.com/2020/12/16/sports-village-in-shivamogga-said-mp-by-raghavendra/
ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯ್ ಕೇವಲ ಮಾನವ ಸಂಪನ್ಮೂಲ ಒದಗಿಸಲಿದೆ. ಭೂಮಿಯು ವಿಶ್ವವಿದ್ಯಾಲಯ ಹೆಸರಲ್ಲೇ ಇರಲಿದೆ. ಮೂರ್ನಾಲ್ಕು ತಿಂಗಳು ಮಾತ್ರ ಸಾಯ್ ಈ ಕ್ರೀಡಾ ಹಬ್ ಬಳಸಿಕೊಳ್ಳಲಿದೆ. ಇನ್ನುಳಿದ ವೇಳೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಕ್ರೀಡಾಂಗಣದ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕೇಂದ್ರದಿಂದ ಅದ್ಭುತ ಯೋಜನೆ | ಕೇಂದ್ರ ಸರ್ಕಾರ ನೀಡಿರುವ ಯೋಜನೆ ಅದ್ಭುತವಾಗಿದೆ. ಇದು ಮಲೆನಾಡಿನ ಕ್ರೀಡಾಪಟುಗಳ ಪಾಲಿಗೆ ದೊಡ್ಡ ಅವಕಾಶವಾಗಲಿದೆ. ಸಹ್ಯಾದ್ರಿ ಕಾಲೇಜಿನಲ್ಲಿ ನಿರ್ಮಾಣ ಹಂತದಲ್ಲಿರುವ ಕ್ರೀಡಾಂಗಣ ಕಾಮಗಾರಿ ಅರ್ಧಂಬರ್ಧ ಆಗಿದ್ದು, ಪೂರ್ಣಗೊಳಿಸಲು ಐದಾರು ಕೋಟಿ ರೂಪಾಯಿ ಬೇಕಾಗಲಿದೆ ಎಂದರು.
ಈ ಯೋಜನೆ ಬೇಡ ಎಂದು ಪ್ರತಿಭಟನೆಗೆ ಮುಂದಾಗಿರುವವರ ಮನವೊಲೈಸಲಾಗುತ್ತಿದೆ. ವಿಶೇಷ ಕ್ರೀಡಾ ತರಬೇತಿ ಸಂಸ್ಥೆಗೆ ಎಲ್ಲಿ ಭೂಮಿ ನೀಡಬೇಕು ಎಂಬ ಅಂಶವನ್ನು ಜಿಲ್ಲಾ ಉಸ್ತುವಾರಿ ಸಚಿªರು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
https://www.suddikanaja.com/2021/04/26/old-students-stand-for-sahyadri-collage/