ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬ್ಯಾಂಕ್ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರಿಗೆ 99,999 ರೂಪಾಯಿ ಪಂಗನಾಮ ಹಾಕಲಾಗಿದೆ.
https://www.suddikanaja.com/2021/03/15/fraud-case-in-cyber-crime-station/
ತೀರ್ಥಹಳ್ಳಿಯ 61 ವರ್ಷದ ನಿವಾಸಿಯೊಬ್ಬರು ಮೋಸ ಹೋಗಿದ್ದು, ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೋಸ ಹೋಗಿದ್ದು ಹೇಗೆ | ಕೊಪ್ಪ ತಾಲೂಕಿನ ಹಿರೇಕುಡಗಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಇದಕ್ಕೆ ಎಟಿಎಂ ಡೆಬಿಟ್ ಕಾರ್ಡ್ ಕೂಡ ಪಡೆದಿದ್ದಾರೆ. ಜೂನ್ 1ರಂದು ರಾತ್ರಿ 10.30ರ ಸುಮಾರಿಗೆ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಮಾತನಾಡಿದ್ದಾರೆ.
https://www.suddikanaja.com/2021/04/24/fraud-agency-cheated-a-man/
ಡೆಬಿಟ್ ಕಾರ್ಡ್ ಅವಧಿ ಮುಗಿದಿದ್ದು, ಅದನ್ನು ನವೀಕರಣ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಎಟಿಎಂ ಹಿಂಭಾಗದಲ್ಲಿರುವ ಸಿವಿವಿ ನಂಬರ್ ಪಡೆದು ಮೂರು ಸಲ ಒಟಿಪಿ ಕಳುಹಿಸುವಂತೆ ತಿಳಿಸಿದ್ದಾರೆ. ಅದಕ್ಕೆ ಅನುಗುಣವಾಗಿ ತೀರ್ಥಹಳ್ಳಿಯ ವ್ಯಕ್ತಿ ಕೇಳಿದ ಮಾಹಿತಿಗಳನ್ನು ನೀಡಿದ್ದಾರೆ. ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ 99,999 ರೂಪಾಯಿ ಆನ್ಲೈನ್ ಮೂಲಕ ಡ್ರಾ ಮಾಡಿ ವಂಚನೆ ಮಾಡಿದ್ದಾರೆ.
ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
https://www.suddikanaja.com/2020/12/12/fraud-in-the-name-of-jan-dhan-scheme-in-bengaluru/