ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಇಲಿ ಮೈ ಮೇಲೆ ಬಿದ್ದು ಕಚ್ಚಿದ್ದಕ್ಕೆ ಮಹಿಳೆಯೊಬ್ಬರು ಗಾಬರಿಕೊಂಡು ಹೃದಯಾಘಾತವಾಗಿದ್ದು, ಮೃತಪಟ್ಟಿದ್ದಾರೆ.
ಕುರುವಳ್ಳಿ ಬೊಮ್ಮರಸಯ್ಯನ ಅಗ್ರಹಾರದ ಆಶ್ರಯ ಬಡಾವಣೆ ನಿವಾಸಿ ಶಕುಂತಲಾ(25) ಎಂಬ ಮಹಿಳೆ ಮೃತಪಟ್ಟಿದ್ದಾರೆ.
ಆಗಿದ್ದೇನು | ಬುಧವಾರ ಮಹಿಳೆಯ ಮೇಲೆ ಇಲಿ ಬಿದ್ದಿದೆ. ಗಾಬರಿಯಿಂದ ಮಹಿಳೆ ಕುಸಿದು ಬಿದ್ದಿದ್ದಾರೆ. ಇಲಿ ಕಚ್ಚಿದೆ. ಹೀಗಾಗಿ, ಗಾಯದ ಮೇಲೆ ಅರಿಷಿಣ ಹಚ್ಚಿ ಮಹಿಳೆಗೆ ಉಪಚರಿಸಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾಳೆ.